More

    ಮಗನ ವಿರುದ್ಧ ದೂರು ಕೊಡಲು ಬಂದವ ಪೊಲೀಸ್​ ಠಾಣೆ ಮುಂದೆಯೇ ನೇಣುಬಿಗಿದುಕೊಂಡ!

    ಹುಮನಾಬಾದ್: ಮಗನ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಆವರಣದಲ್ಲೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳ್ಳಿಖೇಡ್(ಬಿ) ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

    ದುಬಲಗುಂಡಿ ಗ್ರಾಮದ ಶರಣಪ್ಪ ಯಲ್ಲಪ್ಪ(60) ಮೃತ. ಮಗ ಸಂಜುಕುಮಾರನ ವಿರುದ್ಧ ದೂರು ನೀಡಲು ಶರಣಪ್ಪ ಯಲ್ಲಪ್ಪ ಅವರು ಠಾಣೆಗೆ ಬಂದಿದ್ದರು. ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

    ತಂದೆ-ಮಗನ ಮಧ್ಯೆ ಜಗಳವಾಗಿತ್ತು. ಇದರಿಂದ ಸಿಟ್ಟಾದ ತಂದೆ ಶರಣಪ್ಪ, ಮಗನ ವಿರುದ್ಧವೇ ದೂರು ನೀಡಲು ಹಳ್ಳಿಖೇಡ್(ಬಿ) ಠಾಣೆಗೆ ಶುಕ್ರವಾರ ಮಧ್ಯಾಹ್ನ ಬಂದಿದ್ದರು. ತಂದೆಯ ದೂರು ಆಲಿಸಿದ ಪೊಲೀಶರು ಮಗನನ್ನು ಠಾಣೆಗೆ ಕರೆತರಲು ದುಬಲಗುಂಡಿ ಗ್ರಾಮಕ್ಕೆ ತೆರಳಿದ್ದರು. ಮಗ ಬಂದ ಬಳಿಕ ವಿಚಾರ ಮಾಡೋಣ, ಅವನು ಬರೋವರೆಗೂ ನೀವು ಇಲ್ಲೇ ಇರಿ ಎಂದು ಪೊಲೀಸರು ಶರಣಪ್ಪನಿಗೆ ತಿಳಿಸಿದ್ದರು. ಆದಾದ ಕೆಲ ಸಮಯದ ಬಳಿಕ ಹೊರ ಬಂದ ಶರಣಪ್ಪ, ಠಾಣೆ ಆವರಣದಲ್ಲಿರುವ ಆಲದ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

    ಸುದ್ದಿ ತಿಳಿಯುತ್ತಿದಂತೆ ಮೃತನ ಸಂಬಂಧಿಕರು ಠಾಣೆಗೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಡಾ.ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ನಿಂಗಪ್ಪ ಮಣ್ಣೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳ್ಳಿಖೇಡ್(ಬಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts