More

    ಜಲಾಶಯದಲ್ಲಿ ಹರಿದುಹೋದ ರೈತ; 70 ಕಿಮೀ ದೂರದಲ್ಲಿ ಶವ ಪತ್ತೆ

    ಬೀದರ್: ರೈತರೊಬ್ಬರು ತಮ್ಮ ಕೃಷಿ ಭೂಮಿಯಿಂದ ಮನೆಗೆ ಹೋಗುವಾಗ ಜಲಾಶಯದಲ್ಲಿ ಬಿದ್ದು, ನೀರಿನಲ್ಲಿ ಹರಿದು ಹೋಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬೀದರ್​ ಜಿಲ್ಲೆ ಭಾಲ್ಕಿ ತಾಲೂಕಿನ ಸಾಯಗಾಂವ ಗ್ರಾಮದ ನಿವಾಸಿ ವಿನಾಯಕ ಪವಾರ(55) ಮೃತ ದುರ್ದೈವಿ.

    ತಮ್ಮ ಜಮೀನಿನಿಂದ ಮನೆಗೆ ಹೋಗುವ ದಾರಿಯಲ್ಲಿರುವ ಸಾಯಗಾಂವ ಬಳಿಯ ಮಾಂಜ್ರಾ ಜಲಾಶಯದಲ್ಲಿ ಬಿದ್ದಿರುವ ವಿನಾಯಕ ಪವಾರ ಅವರ ಶವವು ಕಮಲನಗರ ತಾಲೂಕಿನ ಸಂಗಮ ಬಳಿ ಜಲಾಶಯದ ನೀರಿನಲ್ಲಿ ಸಿಕ್ಕಿದೆ. ರೈತನ ದೇಹವು ಸುಮಾರು 70 ಕಿಮೀವರೆಗೆ ನೀರಿನಲ್ಲಿ ಹರಿದುಕೊಂಡು ಹೋಗಿರುವುದು ತಿಳಿದುಬಂದಿದೆ.

    ಇದನ್ನೂ ಓದಿ: ಹಫ್ತಾ ನೀಡದ ಬಾರ್ ಮ್ಯಾನೇಜರ್ ಮೇಲೆ ಹಲ್ಲೆ; ತಪ್ಪಿಸಲು ಬಂದವರಿಗೂ ಥಳಿತ..

    ಕಮಲನಗರ ತಹಸೀಲ್ದಾರ್​ ಕೀರ್ತಿ ಮತ್ತು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಾಶಯ ದಾಟುವಾಗ ಕಾಲುಜಾರಿ ನೀರಿಗೆ ಬಿದ್ದಿರಬಹುದು ಎಂದು ಭಾವಿಸಲಾಗಿದೆ. ಮೃತ ರೈತನ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ.

    ವಿಮಾನ ನಿಲ್ದಾಣ ಅಧಿಕಾರಿಗಳ ಬಗ್ಗೆ ದೂರಿದ್ದ ನಟಿ ಸುಧಾ ಚಂದ್ರನ್​ ಕ್ಷಮೆ ಕೋರಿದ ಸಿಐಎಸ್​ಎಫ್

    ನ್ಯಾಯಾಧೀಶರ ಸಾವಿನ ತನಿಖೆ: ಸಿಬಿಐ ನಿರ್ದೇಶಕರಿಗೆ ಹೈಕೋರ್ಟ್​ ಬುಲಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts