ನವದೆಹಲಿ: ನಿನ್ನೆ (ಡಿಸೆಂಬರ್ 12 ರಂದು) ಸೂಪರ್ ಸ್ಟಾರ್ ರಜನಿಕಾಂತ್ ಅವರ ಹುಟ್ಟುಹಬ್ಬವಿತ್ತು. ರಜನಿಕಾಂತ್ ಅವರು ಬಸ್ ಕಂಡಕ್ಟರ್ನಿಂದ ಸೂಪರ್ಸ್ಟಾರ್ ಆಗಿ ಬೆಳೆದು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೆಲ ಅಭಿಮಾನಿಗಳು ರಜನಿಕಾಂತ್ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿದ್ದಾರೆ.
73ರ ಹರೆಯದಲ್ಲೂ ರಜನಿಕಾಂತ್ ಸಿನಿಮಾ ಮಾಡಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬದ ದಿನವಾದ ಕಾರಣ ಅಭಿಮಾನಿಗಳು, ನೆಟಿಜನ್ಗಳು ಮತ್ತು ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸಿದ್ದಾರೆ.
#WATCH | Tamil Nadu: Fans of actor Rajinikanth offered prayers at Rajinikanth temple in Madurai on the occasion of his birth anniversary. pic.twitter.com/Ski0udt9sf
— ANI (@ANI) December 12, 2023
ರಜನಿಕಾಂತ್ ಹುಟ್ಟುಹಬ್ಬ ಅಭಿಮಾನಿಗಳಿಗೆ ಹಬ್ಬ. ನಿನ್ನೆ ರಜನಿ ಮನೆಗೆ ಸಾವಿರಾರು ಅಭಿಮಾನಿಗಳು ಆಗಮಿಸಿ ಶುಭ ಹಾರೈಸಿದ್ದರು. ಅವರ ಹೆಸರಿನಲ್ಲಿ ಹಲವಾರು ಅಭಿಮಾನಿಗಳು ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಅಭಿಮಾನಿಗಳು ರಜನಿಕಾಂತ್ ಅವರಿಗಾಗಿ ನಿರ್ಮಿಸಿರುವ ಕಲ್ಲಿನಲ್ಲಿ ಅವರ ಮೂರ್ತಿಗೆ ಹಾಲು ಹಾಕಿ ವಿಶೇಷ ಪೂಜೆ ಸಲ್ಲಿಸಿದರು.
ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅಭಿಮಾನಿಗಳು ತಮಿಳುನಾಡಿನ ಮಧುರೈನಲ್ಲಿ ದೇಗುಲ ನಿರ್ಮಿಸಿದ್ದರು. ಅದರಲ್ಲಿ ರಜನೀಕಾಂತ್ ಅವರ ವಿಗ್ರಹವನ್ನು ಇಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಿನ್ನೆ ರಜನಿ ಹುಟ್ಟುಹಬ್ಬವಾಗಿದ್ದರಿಂದ ರಜನಿ ಮೂರ್ತಿಗೆ ಹಾಲಿನ ಅಭಿಷೇಕ ಪೂಜೆ ಮಾಡಿ ಆರತಿ ಮಾಡಲಾಯಿತು. ಇದರೊಂದಿಗೆ ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.