More

    ಆಕ್ಸಿಜನ್ ಕಾಳದಂಧೆ ಹಿಂದೆ ಖ್ಯಾತ ಬಿಸಿನೆಸ್​ಮನ್ ! ಆರಂಭವಾಗಿದೆ ಹುಡುಕಾಟ

    ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಆಕ್ಸಿಜನ್ ಉಪಕರಣಗಳ ಕಾಳದಂಧೆಗೆ ಸಂಬಂಧಿಸಿದಂತೆ ನಗರದ ಹಲವು ಜನಪ್ರಿಯ ರೆಸ್ಟೊರೆಂಟ್​​ಗಳ ಮಾಲೀಕ ನವ್​​ನೀತ್​ ಕಾಲ್ರ ಮೇಲೆ ಇದೀಗ ಪೊಲೀಸರ ದೃಷ್ಟಿ ನೆಟ್ಟಿದೆ. ಕಾಲ್ರಗೆ ಸೇರಿದ ಮೂರು ರೆಸ್ಟೊರೆಂಟ್​ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಅಕ್ರಮ ದಾಸ್ತಾನುಗಳು ಪತ್ತೆಯಾಗಿದೆ ಎನ್ನಲಾಗಿದೆ.

    ನಿನ್ನೆ ಲೋಧಿ ಕಾಲೋನಿಯ ನೆಗೆ ಜು ರೆಸ್ಟೊಬಾರ್​​ನ ಶೋಧಕಾರ್ಯ ನಡೆಸಿದ ದೆಹಲಿ ಪೊಲೀಸರು, ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಅವರ ಮಾಹಿತಿಯ ಮೇಲೆ ಒಟ್ಟು 419 ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅದು ಬಿಸಿನೆಸ್​ಮನ್​ ಕಾಲ್ರಗೆ ಸೇರಿದ ರೆಸ್ಟೊರೆಂಟ್​ ಎಂದು ತಿಳಿದುಬಂದಿತ್ತು.

    ಇದನ್ನೂ ಓದಿ: ಉಚಿತವಾಗಿ ಲಸಿಕೆ ಒದಗಿಸಿ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ದೀದಿ ಸರ್ಕಾರ

    ಇಂದು ಬೆಳಿಗ್ಗೆ ಅದೇ ಲೋಧಿ ಕಾಲೋನಿಯ ಟೌನ್​ ಹಾಲ್​ ರೆಸ್ಟೊರೆಂಟ್​ ಮೇಲೆ ಪೊಲೀಸರು ರೇಡ್​ ನಡೆಸಿದಾಗ ಒಂಭತ್ತು ಕಾನ್ಸಂಟ್ರೇಟರ್​ಗಳು ಪತ್ತೆಯಾಗಿವೆ. ಖಾನ್ ಮಾರ್ಕೆಟ್​ನಲ್ಲಿರುವ ಖಾನ್​ ಚಾಚಾ ಎಂಬ ಮತ್ತೊಂದು ರೆಸ್ಟೊರೆಂಟ್​ಗೆ ರೇಡ್​ ಮಾಡಿದಾಗ ಅಲ್ಲಿ 100 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ಸಿಕ್ಕಿವೆ. ಎರಡೂ ರೆಸ್ಟೊರೆಂಟ್​ಗಳು ಕಾಲ್ರಗೆ ಸೇರಿದವು ಎನ್ನಲಾಗಿದೆ. ಒಟ್ಟು, 524 ಕಾನ್ಸಂಟ್ರೇಟರ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಖಾನ್​ ಚಾಚಾ ರೆಸ್ಟೊರೆಂಟ್​​ನ ಹೊರಗೆ ಜನರು ಆಕ್ಸಿಜನ್ ಉಪಕರಣ ಖರೀದಿಸಲು ಕ್ಯೂ ನಿಂತಿರುವ ವಿಡಿಯೋ ಮತ್ತು ಕಾಲ್ರ ಉಪಕರಣಗಳ ಪೂರೈಕೆ ಬಗ್ಗೆ ಮಾತನಾಡಿರುವ ವಾಟ್ಸಾಪ್​ ಚಾಟ್​ಗಳ ಫೋಟೋಗಳನ್ನು ಇಂಡಿಯಾ ಟುಡೇ ಪ್ರಸಾರ ಮಾಡಿದೆ ಎನ್ನಲಾಗಿದೆ. ಈ ಎಲ್ಲ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆಕ್ಸಿಜನ್ ಉಪಕರಣಗಳ ಕಾಳದಂಧೆಯ ಸೂತ್ರಧಾರ ಎಂಬ ಅನುಮಾನದ ಮೇಲೆ ನವ್​​ನೀತ್​ ಕಾಲ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಪರಿಣಾಮಕಾರಿ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ತಡೆಯಬಹುದು : ಡಾ.ವಿಜಯರಾಘವನ್

    ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts