ಗದಗ: ಕೌಶಲ್ಯಾಭಿವೃದ್ಧಿ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆಯ ಸಿಬ್ಬಂದಿ ನಿರುತ್ಸಾಹ ಮತ್ತು ಪ್ರಚಾರದ ಕೊರತೆಯಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಜರುಗಿದ ಸ್ವಸಹಾಯ ಗುಂಪುಗಳು ತಯಾರಿಸಿದ ಕೈಗಾರಿಕಾ ಉತ್ಪನ್ನಗಳ ವಸ್ತು ಪ್ರದರ್ಶ ಮತ್ತು ಮಾರಾಟ ಮೇಳ ಸಂರ್ಪೂಣ ವಿಲಗೊಂಡಿದೆ. ವಸ್ತು ಪ್ರದರ್ಶನಕ್ಕೆ ಸರ್ಕಾರ ಮಿಸಲಿಟ್ಟ 5 ಲಕ್ಷ ರೂ. ಅನಗತ್ಯ ತಲೆದಂಡ ಎಂಬುದು ಸ್ಪಷ್ಟವಾಗಿದೆ.
ಎನ್ಆರ್ಎಲ್ಎಂ, ಜಿಲ್ಲಾ ವಾಣಿಜೋದ್ಯಮ, ಕರ್ನಾಟಕ ಗ್ರಾಮೀಣ ಖಾದಿ ಕೈಗಾರಿಗಾ ಬೋರ್ಡ್ ಸಹಯೋಗದಲ್ಲಿ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕಳೆದ 5 ದಿನಗಳಿಂದ ಜರಗುತ್ತಿರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಅಳವಡಿಸಿದ ಮಳಿಗೆಗಳು ಬಿಕೋ ಎನ್ನುತ್ತಿದ್ದು, ಜನರಿಲ್ಲದೆ ವಸ್ತು ಪ್ರದರ್ಶನವನ್ನು ಸ್ವಸಹಾಯ ಸಂಘಗಳು, ಕೈಗಾರಿಕೋದ್ಯಮಿಗಳು ಹಿಂಪಡೆದಿದ್ದಾರೆ. 40 ಮಳಿಗೆಗಳ ಪೈಕಿ ಶೇ. 50 ರಷ್ಟು ಭತಿರ್ಯಾಗಿಲ್ಲ. ಸ್ವಸಹಾಯ ಸಂಗಳಿಗೆ ವಸತಿ, ಸಾರಿಗೆ ವ್ಯವಸ್ಥೆ, ಸ್ಟಾಲ್ ಗಳನ್ನು ಉಚಿತವಾಗಿ ನೀಡಿದ್ದರೂ ಕೂಡ ಗುಡಿ ಕೈಗಾರಿಕೋದ್ಯಮಿಗಳ ಉತ್ಸಾಹ ತೋರಿಲ್ಲ. ಅದರಲ್ಲೂ ಪ್ರಚಾರದ ಕೊರತೆಯಿಂದಲೂ ಕೂಡ ಜನರು ಇತ್ತಕಡೆ ಮುಖ ಮಾಡಿಲ್ಲ ಎಂಬುದೇ ವಿಪರ್ಯಾಸ. ಈ ಹಿನ್ನೆಲೆ ಆಯೋಜಕರೆ ಪ್ರದರ್ಶನಕ್ಕೆ ಮೀಸಲಿಟ್ಟ 5 ದಿನಗಳ ಅವಧಿ ಪೂರ್ವದಲ್ಲೇ ಮಳಿಗೆಗಳನ್ನು ತೆಗೆಯಲು ನಿರ್ಧರಿಸಿದ್ದಾರೆ.
ಜಿಲ್ಲೆಯ ಸ್ವಸಹಾಯ ಸಂಗಳ ಉತ್ಪನ್ನಗಳಿಗೆ ಪ್ರೊತ್ಸಾಹ ಮತ್ತು ಪ್ರಚಾರ ನೀಡುವ ಉದ್ದೇಶದೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಯೋಜನೆ ಜಾರಿ ತಂದಿದೆ. ಪ್ರತಿ ವರ್ಷ ಇಲಾಖಾ ಅನುದಾನದಡಿ (5 ಲಕ್ಷ ರೂ.) ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಆದರೆ ಅನುದಾನಕ್ಕೆ ಖರ್ಚು ತೋರಿಸಿ ಬಿಲ್ ಪಡೆಯಬೇಕೆಂಬ ಉದ್ದೇಶದೊಂದಿಗೆ ಇಂತಹ ವಸ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಆರೋಪಕ್ಕೆ ಪುಷ್ಟಿ ನೀಡುವಂತೆ ನಗರದಲ್ಲಿ ನಡೆದಿರುವ ಕೈಗಾರಿಕಾ ವಸ್ತು ಪ್ರದರ್ಶನ ಸಾಯಾಗಿದೆ.
ಬಾಕ್ಸ್:
ಗಾಣದ ಎಣ್ಣೆ, ಬಟ್ಟೆ, ಗೃಹ ಕೈಗಾರಿಕೆ, ಗೃಹ ಅಲಂಕಾರ ವಸ್ತು, ಾಸ್ಟ್ ುಡ್, ನೇಕಾರ ಸೀರೆ, ರೊಟ್ಟಿ, ಚಟ್ಟಿ ಉಪ್ಪಿನಕಾಯಿ ತಯಾರಿಕೆ, ಸೆಣಬು ಕೈಗಾರಿಕೆ, ಗಿಮಿರ್ಟ್ ವ್ಯಾಪಾರ, ಸ್ಟೇಷನರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.
ಕೋಟ್:
ಪ್ರತಿವರ್ಷ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ವಸ್ತು ಪ್ರದರ್ಶನ ಹಮ್ಮಿಕೊಂಡಿರುವ ಸ್ಥಳದ ಪಕ್ಕದಲ್ಲೇ ಖಾಸಗಿ ಸಮ್ಮೇಳನ ನಡೆದಿರುವ ಕಾರಣ ಹಿನ್ನಡೆ ಅನುಭವಿಸಿದ್ದೇವೆ.
– ಚಂದ್ರಶೇಖರ್, ಜಿಲ್ಲಾ ಯೋಜನಾ ನಿರ್ವಾಹಕ, ಎನ್ಆರ್ಎಲ್ಎಂ