More

    ಫ್ಯಾಕ್ಟರಿ ಮಾಲೀಕನನ್ನೇ ಅಪಹರಿಸಿದ್ದ ಭೂಪರು ..!

    ಹುಬ್ಬಳ್ಳಿ: ಟ್ರ್ಯಾಕ್ಟರ್​ ಟ್ರೇಲರ್​ ನಿರ್ಮಾಣಕ್ಕೆ ಆರ್ಡರ್​ ಪಡೆದು ಮುಂಗಡವಾಗಿ ಲಕ್ಷಾಂತರ ರೂ. ಪಡೆದು ಟ್ರೇಲರ್​ ಕೊಡದೇ ಸತಾಯಿಸುತ್ತಿದ್ದ ಫ್ಯಾಕ್ಟರಿ ಮಾಲೀಕನನ್ನೇ ಮಹಾರಾಷ್ಟ್ರ ಮೂಲದ 7 ಜನರ ತಂಡ ಅಪಹರಿಸಿದ್ದ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
    ಇಲ್ಲಿನ ಗೋಕುಲ ಕೈಗಾರಿಕಾ ಪ್ರದೇಶದ ಕೃಷಿ ಇಂಪ್ಲಿಮೆಂಟ್​ ಮತ್ತು ಇಂಜಿನಿಯರಿಂಗ್​ ವರ್ಕ್ಸ್​ ಮಾಲೀಕ ಪರಶುರಾಮ ನೂಲ್ವಿ ಅಪಹರಣಕ್ಕೀಡಾಗಿದ್ದವರು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್​ ತಾಲೂಕಿನ ಮುತ್ನಾಲ ಗ್ರಾಮದ ಕೆಲವರು ಟ್ರಾಕ್ಟರ್ ಟ್ರೇಲರ್​ ತಯಾರಿಸಲು ಪರಶುರಾಮ ಅವರ ಫ್ಯಾಕ್ಟರಿಗೆ ಆರ್ಡರ್​ ಕೊಟ್ಟಿದ್ದರು. ಇದಕ್ಕಾಗಿ ಮುಂಗಡವಾಗಿ ಹಣ ನೀಡಿದ್ದರು. ಹಲವು ಬಾರಿ ಹುಬ್ಬಳ್ಳಿಗೆ ಬಂದು ಹೋಗಿದ್ದರೂ ಟ್ರೇಲರ್​ ನಿಮಿರ್ಸಿರಲಿಲ್ಲ. ಜು.19ರಂದು ಕೂಡ ಕೆಲಸ ಆಗಿರಲಿಲ್ಲ. ಇದರಿಂದ ಬೇಸತ್ತ 7 ಜನರಿದ್ದ ತಂಡ ಪರಶುರಾಮ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದರು.

    ಮಹಾರಾಷ್ಟ್ರದ 7 ಜನರ ಬಂಧನ
    ಅಪಹರಣದ ಕುರಿತು ಫ್ಯಾಕ್ಟರಿಯವರು ಗೋಕುಲ ರೋಡ್​ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಇನ್​ಸ್ಪೆಕ್ಟರ್​ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಕೂಡಲೇ ಕಾರ್ಯಪ್ರವೃತ್ತರಾದರು. ಬೆಳಗಾವಿ ಗಡಿ ಭಾಗದ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್​ ಪೊಲೀಸರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಅವರ ಸಹಾಯದಿಂದ ಆರೋಪಿತರನ್ನು ಮೂರು ಗಂಟೆಯೊಳಗೆ ಬಂಧಿಸಿ ಕರೆತಂದಿದ್ದಾರೆ. ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗೋಕುಲ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts