More

    ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಫೇಸ್​ಬುಕ್​.. ದೆಹಲಿ ಸದನ ಸಮಿತಿಯ ನೋಟಿಸ್​ಗೇ ಚಾಲೆಂಜ್​..

    ನವದೆಹಲಿ: ದೆಹಲಿಯ ಸದನ ಸಮಿತಿ ನೀಡಿದ್ದ ನೋಟಿಸ್​ ಸಂಬಂಧ ಫೇಸ್​ಬುಕ್​ ಇಂಡಿಯಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಬುಧವಾರ ಫೇಸ್​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.

    ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಎರಡು ದಿನಗಳ ಹಿಂದೆ ಫೇಸ್​ಬುಕ್​ ಸಂಸ್ಥೆಗೆ ಹೊಸ ಹಾಗೂ ಅಂತಿಮ ಸಮನ್ಸ್ ಜಾರಿ ಮಾಡಿತ್ತು. ಮಾತ್ರವಲ್ಲ ಫೇಸ್​ಬುಕ್​ ಇಂಡಿಯಾದ ಪ್ರತಿನಿಧಿಗಳು ಬುಧವಾರದೊಳಗೆ ಸಮಿತಿ ಮುಂದೆ ಹಾಜರಾಗಬೇಕು ಎಂಬುದಾಗಿ ಸಮನ್ಸ್​ ಮೂಲಕ ತಾಕೀತು ಮಾಡಿತ್ತು.

    ದ್ವೇಷಪೂರಿತ ಪೋಸ್ಟ್ ಸಂಬಂಧ ನಿಯಮ ರೂಪಿಸಲು ಫೇಸ್​ಬುಕ್​ ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ ಫೇಸ್​ಬುಕ್​ ಇಂಡಿಯಾ ಇದೀಗ ಆ ಸಮನ್ಸ್​ ಔಚಿತ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts