ನವದೆಹಲಿ: ದ್ವೇಷಯುಕ್ತ ಪೋಸ್ಟ್ಗಳು, ದ್ವೇಷ ಭಾಷಣದ ವಿಡಿಯೋಗಳ ಅಪ್ಲೋಡ್ ವಿಚಾರದಲ್ಲಿ ತಾರತಮ್ಯ ತೋರುತ್ತಿದ್ದಾರೆ, ಆಡಳಿತರೂಢ ಪಕ್ಷ ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆ ಎಂಬಿತ್ಯಾದಿ ಆರೋಪ ಎದುರಿಸುತ್ತಿದ್ದ ಫೇಸ್ಬುಕ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಂಖಿ ದಾಸ್ ಅವರು 9 ವರ್ಷಗಳಿಂದಲೂ ಫೇಸ್ಬುಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೇಸ್ಬುಕ್ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ದ್ವೇಷ ಭಾಷಣ, ಪೋಸ್ಟ್ಗೆ ಸಂಬಂಧಪಟ್ಟಂತೆ ಇರುವ ಫೇಸ್ಬುಕ್ ನೀತಿ ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಇವರ ವಿರುದ್ಧ ಕೇಳಿಬಂದಿತ್ತು. ಇದರ ವಿಚಾರಣೆಯ ಸಲುವಾಗಿ ಅಂಖಿ ದಾಸ್ ಹಾಗೂ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸಂಸದೀಯ ಸಮಿತಿ ಎದುರು ಹಾಜರಾಗಿದ್ದರು. ಇದನ್ನೂ ಓದಿ: ಮಧ್ಯರಾತ್ರಿ ಫೋನ್ ಸಂಭಾಷಣೆ, ಮರುದಿನವೇ ನಡೆಯಿತು ಯುವತಿ ಹತ್ಯೆ: ಕಾರಣ ಬಿಚ್ಚಿಟ್ಟ ಆರೋಪಿ
ಅಂತಿಮವಾಗಿ ಅಂಖಿ ದಾಸ್ ತಮ್ಮ ಸ್ಥಾನ ತೊರೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಖಿ ರಾಜೀನಾಮೆ ಸಲ್ಲಿಸಿದ್ದಾರೆ. ಅಂಖಿ ದಾಸ್ ಅವರು ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಇದ್ದವರು. ಭಾರತದಲ್ಲಿ ಫೇಸ್ಬುಕ್ ಶುರುವಾದ ಆರಂಭದ ಕಾಲದಿಂದಲೂ ಇದ್ದರು. ಕಂಪನಿಯ ಏಳ್ಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಅಜಿತ್ ಮೋಹನ್ ತಿಳಿಸಿದ್ದಾರೆ. (ಏಜೆನ್ಸೀಸ್)
ಮದರಸಾದ ಮೇಲೆ ಬಾಂಬ್ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ