More

    3 ಕಡೆ ಅಬಕಾರಿ ಅಧಿಕಾರಿಗಳು ದಾಳಿ

    ಬೆಂಗಳೂರು: ಅಬಕಾರಿ ಅಧಿಕಾರಿಗಳು ಕೋಣನಕುಂಟೆ ವ್ಯಾಪ್ತಿಯಲ್ಲಿ ೩ ಕಡೆ ದಾಳಿ ನಡೆಸಿ ೨೯. ೦೩ ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.
    ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜ್ ಖಾನ್ ಕಿಲ್ಲೆದಾರ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕಿ ಚೈತ್ರ ಅವರು ಬೆಂಗಳೂರು ನಗರ ಜಿಲ್ಲೆ-೮ ರ ವಲಯ ೪೮ ಕೋಣನಕುಂಟೆ ವ್ಯಾಪ್ತಿಯಲ್ಲಿ ರಾಘವೇಂದ್ರ ನಗರದಲ್ಲಿ ಏಕಕಾಲದಲ್ಲಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ವಿವಿಧ ಬ್ರಾಂಡುಗಳ ಒಟ್ಟು ೭೬೦ ಬಾಕ್ಸ್ ಮದ್ಯ ಮತ್ತು ಒಂದು ಎಂಡೋವರ್ ಕಾರನ್ನು ಜಪ್ತಿ ಮಾಡಿದ್ದಾರೆ. ಮದ್ಯದ ಒಟ್ಟು ಮೌಲ್ಯ ೨೯,೦೩,೭೧೨ ರೂ. ಆಗಿದ್ದು ವಾಹನದ ಮೌಲ್ಯ ೬ ಲಕ್ಷ ರೂ. ಆಗಿದೆ. ಆರೋಪಿ ಸುರತ್ತು ವೆಂಕಟಸ್ವಾಮಿ ತ್ರಿಶಾಲ್ ನನ್ನು ಬಂಧಿಸಲಾಗಿದೆ.
    ಅಬಕಾರಿ ನಿರೀಕ್ಷಕ ಕೇಶವ ಕೇಶವಮೂರ್ತಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಮದ್ಯವನ್ನು ಆಂಧ್ರಪ್ರದೇಶ ರಾಜ್ಯದಲ್ಲಿ ಚುನಾವಣಾ ಉದ್ದೇಶಕ್ಕೆ ಸಾಗಾಣಿಕೆ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ದಾಳಿಯಲ್ಲಿ ಕೋಣನಕುಂಟೆ ವಲಯ ಅಬಕಾರಿ ನಿರೀಕ್ಷಕ ಅರುಣ್, ಜೆಪಿ ನಗರ ಅಬಕಾರಿ ನಿರೀಕ್ಷಕರಾದ ಕೀರ್ತನ, ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಅಬಕಾರಿ ಸಿಬ್ಬಂದಿ ಕುಮಾರ್, ಬಸವರಾಜ್, ಶಂಕರ್, ಮತ್ತು ರಂಗನಾಥ್ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts