More

    ವಿಧಾನಪರಿಷತ್ ಮಾಜಿ ಸದಸ್ಯನಿಗೀಗ ಬಂಧನದ ಭೀತಿ; ಮದುವೆ ವಿಚಾರದಲ್ಲಿ ಮಾಡಿದ್ದ ಜಾತಿ ನಿಂದನೆ..

    ಉತ್ತರಕನ್ನಡ: ರಾಜ್ಯದಾದ್ಯಂತ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಿರುಸಾದ ರಾಜಕೀಯ ಚಟುವಟಿಕೆ ನಡೆಯುತ್ತಿದ್ದರೆ ಇಲ್ಲೊಬ್ಬರು ಮಾಜಿ ಎಂಎಲ್​ಸಿಗೆ ಬಂಧನದ ಭೀತಿ ಕಾಡಲಾರಂಭಿಸಿದೆ. ಯಾವ ಕ್ಷಣದಲ್ಲಿ ಬಂಧನವಾಗುವುದೋ ಎಂಬ ಭಯದಲ್ಲಿ ಅವರಿದ್ದಾರೆ ಎನ್ನಲಾಗಿದೆ.

    ಸದ್ಯ ಬಂಧನದ ಭೀತಿ ಎದುರಿಸುತ್ತಿರುವ ಈ ಮಾಜಿ ಎಂಎಲ್​ಸಿಯ ಹೆಸರು ಶ್ರೀಕಾಂತ ಘೋಟ್ನೇಕರ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಇವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಸೆ. 11ರಂದು ದಾಖಲಾಗಿದ್ದ ಈ ದೂರಿನ ಹಿನ್ನೆಲೆಯಲ್ಲಿ ಬಂಧನವಾಗುವ ಸಾಧ್ಯತೆ ಇರುವುದರಿಂದ ಇವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಕೋವಿಡ್ ಪರೀಕ್ಷೆಗೆ ಇಷ್ಟೇ ಹಣ ತೆಗೆದುಕೊಳ್ಳಬೇಕು; ಇದಕ್ಕಿಂತ ಜಾಸ್ತಿ ಪಡೆಯುವಂತಿಲ್ಲ

    ಆದರೆ ವಿಧಾನಪರಿಷತ್ ಮಾಜಿ ಸದಸ್ಯ ಶ್ರೀಕಾಂತ ಘೋಟ್ನೇಕರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾರವಾರ ಸೆಷನ್ಸ್​ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಇವರ ಬಂಧನವಾದರೂ ಅಚ್ಚರಿ ಏನಿಲ್ಲ. ಅದೇ ಕಾರಣಕ್ಕೆ ಮಾಜಿ ಎಂಎಲ್​ಸಿ ವಿಚಲಿತಗೊಂಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ದೇವಸ್ಥಾನಗಳ ಬಾಗಿಲು ಮುರಿದು ಒಳಹೊಕ್ಕು ವಿಗ್ರಹಗಳ ಧ್ವಂಸ; ಆರೋಪಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

    ಮದುವೆಯೊಂದರ ವಿಚಾರದಲ್ಲಿ ಶ್ರೀಕಾಂತ ಜಾತಿನಿಂದನೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲೇ ಜಾತಿ ಹೆಸರಲ್ಲಿ ನಿಂದಿಸಿದ್ದರು ಎಂಬುದಾಗಿ ವಿನೋಧ ಮಹಾದೇವ ತೇಗನಳ್ಳಿ ಅವರು 2019ರಲ್ಲಿ ಶ್ರೀಕಾಂತರ ವಿರುದ್ಧ ದೂರು ದಾಖಲಿಸಿದ್ದರು.

    ಸಾಲಿಗ್ರಾಮ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ; ಕೆಲಸವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts