More

    ಒಂದು ಪಕ್ಷದ ಪರ ಮುಖವಾಡ ಹಾಕಿ ನಿಲ್ಲಬೇಡಿ ಎಂದು ದೊರೆಸ್ವಾಮಿ ಬಳಿ ಪ್ರಾರ್ಥಿಸಿದ ಈಶ್ವರಪ್ಪ

    ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತಾಗಿ ಶಾಸಕ ಬಸವರಾಜ್​ ಯತ್ನಾಳ್​ ನೀಡಿದ್ದ ಹೇಳಿಕೆಯನ್ನು ಸಚಿವ ಕೆ.ಎಸ್​.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

    ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಅವರು, “ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಅವರು ನೇರವಾಗಿ ಕಾಂಗ್ರೆಸ್​ಗೆ ಬೆಂಬಲಿಸುತ್ತಿದ್ದಾರೆ. ದಯಮಾಡಿ ಒಂದು ಪಕ್ಷದ ಪರ ಮುಖವಾಡ ಹಾಕಬೇಡಿ ಎಂದು ದೊರೆಸ್ವಾಮಿ ಅವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

    ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತಾವೇ ಅಂಬೇಡ್ಕರ್​, ತಾವೇ ಸಂವಿಧಾನ ಬರೆದಿರೋದು ಎನ್ನುವ ರೀತಿಯಲ್ಲಿ ಆಡುತ್ತಾರೆ. ಕಾಂಗ್ರೆಸ್​ನವರು ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎನ್ನುವವರಿಗೆ ರಮೇಶ್​ ಕುಮಾರ್​ ಏನು ಮಾಡುತ್ತಾರೆ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೊಲೆಗಡುಕ ಎಂದಿದ್ದ ಸಿದ್ದರಾಮಯ್ಯನವರನ್ನು ಯಾಕೆ ಉಚ್ಚಾಟನೆ ಮಾಡಲಿಲ್ಲ? ಎಂದು ಕೇಳಿದ್ದಾರೆ.

    ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಕ್ಕೆ ಉತ್ತರಿಸಿರುವ ಅವರು, ರೈತ ನಾಯಕ ಅಂತ ಎಚ್​ಡಿಕೆ ಫೋಸ್​ ಕೊಡುತ್ತಾರೆ. ಆದರೆ ಅವರ ಬಳಿ ಚುನಾವಣೆಯಲ್ಲಿ ಅವರ ಅಪ್ಪ ಮತ್ತು ಮಗನನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ. ರೈತರ ಪರ ಮಾತನಾಡುವುದಕ್ಕೆ ನಿಮಗೇನು ನೈತಿಕ ಹಕ್ಕಿದೆ? ಬಜೆಟ್​ ನೋಡಿ, ಆಮೇಲೆ ಬಿಜೆಪಿ ಏನು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ನುಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO: ವೀರ ಸಾವರ್ಕರ್ ಅವರಷ್ಟು ಲಾಠಿ ಏಟು ತಿಂದಿದ್ರಾ ದೊರೆಸ್ವಾಮಿ, ಸ್ವಾತಂತ್ರ್ಯ ಸಿಗುವ ವೇಳೆಗೆ ಅವರ ವಯಸ್ಸೆಷ್ಟು ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts