More

    ದಾರಿ ತಪ್ಪಿದ ಕಾಡಾನೆ ಓಡಿಸಲು ಮುಂದಾದವನನ್ನೇ ಬಲಿ ಪಡೆಯಿತು ಆನೆ…

    ಕೊಯಮತ್ತೂರು: ಕಾಡಾನೆ ದಾಳಿಗೆ ಸಿಲುಕಿ ಇಟ್ಟಿಗೆ ಭಟ್ಟಿ ಕೆಲಸಗಾರನೊಬ್ಬ ಸಾವಿಗೀಡಾದ ಘಟನೆ ಪೆರಿಯಾ ತಡಗಮ್​​ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
    ಬಾಬುಲ್ ಹುಸೇನ್ (23) ಸಾವಿಗೀಡಾದವ. ಆತ ಇತರರೊಂದಿಗೆ ದಾರಿ ತಪ್ಪಿದ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ ಅದು ಅವರ ಮೇಲೆ ಹಲ್ಲೆ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​19: ಮರಣ ದರ ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರದ ಸೂಚನೆ

    ಗಾಯಗೊಂಡ ಹುಸೇನ್ ನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ, ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಡು ಪ್ರಾಣಿಗಳನ್ನು ಕಾಡಿಗೆ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರೋಗಿಯೋರ್ವ ಮೃತಪಟ್ಟರೂ ಗೊತ್ತಾಗಲಿಲ್ಲ ಆಸ್ಪತ್ರೆ ಸಿಬ್ಬಂದಿಗೆ; ಶವ ವಾಸನೆ ಬಂದ ಮೇಲಷ್ಟೇ ಗೊತ್ತಾಯ್ತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts