More

    ಹುಳಿಯಾರು ಪಪಂ ಬಿಜೆಪಿ ಪಾಲು ; ಕಾಂಗ್ರೆಸ್ ಸದಸ್ಯನ ಗೈರಿನಿಂದ ಖುಲಾಯಿಸಿದ ಅದೃಷ್ಟ ; ನೂತನ ಅಧ್ಯಕ್ಷರಾಗಿ ಕೆಎಂಎಲ್ ಕಿರಣ್, ಉಪಾಧ್ಯಕ್ಷೆ ಶ್ರುತಿ ಸನತ್ ಆಯ್ಕೆ

    ಹುಳಿಯಾರು : ತೀವ್ರ ಕುತೂಹಲ ಕೆರಳಿಸಿದ್ದ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಸದಸ್ಯ ರಾಜುಬಡಗಿ ಗೈರಿನಿಂದ ಬಿಜೆಪಿಗೆ ಅಧಿಕಾರ ಒಲಿದಿದೆ.

    ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕೆಎಂಎಲ್ ಕಿರಣ್‌ಕುವಾರ್ ಹಾಗೂ ಉಪಾಧ್ಯಕ್ಷೆಯಾಗಿ ಶ್ರುತಿ ಸನತ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ ಪಟ್ಟಣ ಪಂಚಾಯಿತಿಯ ಪ್ರಥಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಎಂಬ ದಾಖಲೆಗೆ ಭಾಜನರಾದರು.

    ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೆಎಂಎಲ್ ಕಿರಣ್ ಕುವಾರ್, ಕಾಂಗ್ರೆಸ್‌ನ ದಸ್ತಗೀರ್ ಸಾಬ್ ಹಾಗೂ ಪಕ್ಷೇತರವಾಗಿ ಸೈಯದ್ ಜಹೀರ್ ಸಾಬ್ ನಾಮಪತ್ರ ಸಲ್ಲಿಸಿದ್ದರಾದರೂ ಕೊನೆಯ ಕ್ಷಣದಲ್ಲಿ ಜಹೀರ್ ಸಾಬ್ ಹಿಂಪಡೆದರು. ಹಾಗೆಯೇ ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶ್ರುತಿ ಸನತ್ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಪ್ರೀತಿ ರಾವೇಂದ್ರ ಸೇರಿ ಒಟ್ಟು ಇಬ್ಬರು ನಾಮಪತ್ರ ಸಲ್ಲಿಸಿದರು.
    ನಂತರ ಒಂದು ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಕಲಾಪ ಆರಂಭವಾಯಿತು. ಒಟ್ಟು 16 ಮಂದಿ ಸಂಖ್ಯಾಬಲವುಳ್ಳ ಪಂಚಾಯಿತಿಯಲ್ಲಿ ಹಾಲಿ ಶಾಸಕರ ಹಾಗೂ ಸಂಸದರ ಮತವೂ ಸೇರಿ 18 ಮತಗಳು ಚಲಾವಣೆಯಾಗಬೇಕಿತ್ತು. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರಯ್ಯ (ಬಡಗಿ ರಾಜು) ಗೈರು ಹಾಜರಾತಿಯಲ್ಲಿ ಒಟ್ಟು 15 ಸದಸ್ಯರು ಪಾಲ್ಗೊಂಡಿದ್ದರು.

    ಬಿಜೆಪಿಯಿಂದ ಆಯ್ಕೆಯಾದ 6 ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯೆಯ ಬೆಂಬಲ ಹಾಗೂ ಶಾಸಕ ಮತ್ತು ಸಂಸದರ ಮತ ಸೇರಿ ಒಟ್ಟು 9 ಮತಗಳು ಚಲಾವಣೆಗೊಂಡಿತು. ಹಾಗೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್‌ನ ಐದು ಸದಸ್ಯರ ಪೈಕಿ 4 ಸದಸ್ಯರು ಹಾಗೂ ಜೆಡಿಎಸ್‌ನ 3 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯನ ಬೆಂಬಲ ಸೇರಿ ಒಟ್ಟು 8 ಮತಗಳು ಚಲಾವಣೆಗೊಂಡವು.

    17 ಮತಗಳ ಸಂಖ್ಯಾಬಲಕ್ಕೆ ಬಿಜೆಪಿ ಅಭ್ಯರ್ಥಿಗಳಿಗೆ ಒಟ್ಟು 9 ಮತಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ 8 ಮತಗಳು ಲಭಿಸುವ ಮೂಲಕ ಒಂದು ಮತದ ಅಂತರದಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯುವ ಉದ್ಯಮಿ ಕೆಎಂಎಲ್ ಕಿರಣ್ ಕುವಾರ್ ಅಧ್ಯಕ್ಷರಾಗಿ ಚುನಾಯಿತಗೊಂಡರೆ, ಎಂಕಾಂ ಪದವೀಧರೆ ಶೃತಿ ಸನತ್ ಉಪಾಧ್ಯಕ್ಷೆಯಾದರು.

    ಹಾಜರಿದ್ದ ಸದಸ್ಯರ ಪರ, ವಿರೋಧ ಸಹಿಗಳು ಹಾಗೂ ಕೈ ಎತ್ತುವುದರ ಮೂಲಕ ಮತಚಲಾವಣೆ ಪ್ರಕ್ರಿಯೆ ವಾಡಲಾಯಿತು. ಚುನಾವಣಾಧಿಕಾರಿ ತಹಸೀಲ್ದಾರ್ ತೇಜಸ್ವಿನಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ೋಷಿಸಿದರು. ಸಚಿವ ಜೆ.ಸಿ.ವಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

    ವಿಪ್ ಜಾರಿಯಾದರೂ ಗೈರು : ಪಪಂ ಚುನಾವಣೆ ನಡೆದು ಯಾರಿಗೂ ಬಹುಮತ ಬಾರದ್ದರಿಂದ ಅಂದಿನಿಂದಲೂ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ನಾನಾ ರೀತಿಯ ಲೆಕ್ಕಾಚಾರ ನಡೆಯುತ್ತಲೇ ಇತ್ತು. ಒಮ್ಮೆ ಬಿಜೆಪಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬ ಸ್ಥಿತಿ ಇತ್ತು. ರಾಜಕೀಯ ತಂತ್ರಗಾರಿಕೆ ಫಲವಾಗಿ ಚುನಾವಣೆಯನ್ನೂ ಮುಂದೂಡಲಾಗಿತ್ತು. ಚುನಾವಣೆ ದಿನಾಂಕ ೋಷಣೆಯಾದ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜು ಬಡಗಿ ನಾಟ್ ರೀಚಬಲ್ ಆಗಿ ಯಾರ ಕೈಗೂ ಸಿಗದೆ, ಏನಾಗಿದೆ ಎಂಬ ವಾಹಿತಿಯೂ ತಿಳಿಯದೆ, ಕಾಂಗ್ರೆಸ್ ವಿಪ್ ಜಾರಿ ವಾಡಿದ್ದರೂ ಹಾಜರಾಗದೆ ಚುನಾವಣೆಯ ಚಿತ್ರಣವೇ ಬದಲಾಗಿ ಬಿಜೆಪಿಗೆ ಗೆಲುವಿಗೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts