More

    ಹಿಂದೂ ಸಮಾಜವನ್ನು ಒಡೆಯುವುದಕ್ಕೆಂದೇ ಆಕ್ಷೇಪ ಮಾಡುವವರಿದ್ದಾರೆ: ಸಚಿವ ಬಿ.ಸಿ.ನಾಗೇಶ್​

    ಹಾಸನ: ಪ್ರತಿಯೊಂದು ವಿಷಯದಲ್ಲೂ ಆಕ್ಷೇಪ ಮಾಡುತ್ತಿರುವವರು ಹಿಂದೂ ಸಮಾಜವನ್ನು ಒಡೆಯುವ ಉದ್ದೇಶವನ್ನೇ ಇಟ್ಟುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದ್ದಾರೆ.

    ಭಾರತೀಯ ಸಂಸ್ಕೃತಿಗೆ ಬೇಕಾದ ಪುಸ್ತಕಗಳು ಯಾವಾಗ ಬಂದರೂ ಅದನ್ನು ವಿರೋಧಿಸುತ್ತಾ ಬಂದಿದ್ದಾರೆ. ಒಂದೇ ಸಮುದಾಯದವರನ್ನು ಓಲೈಕೆ ಮಾಡಲು ಹಿಂದುಗಳನ್ನೇ ವಿರೋಧ ಮಾಡುತ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.ಇದಕ್ಕಾಗಿ ಎಂದೇ ಒಂದಿಷ್ಟು ಜನ ಸಹಕಾರ ನೀಡುತ್ತಾರೆ, ಎಡಪಂಥೀಯ ಎಂಬ ಹೆಸರಲ್ಲಿ ನಮ್ಮ ಸಮಾಜ ಹಾಗೂ ಸಂಸ್ಕೃತಿಯನ್ನು ಒಡೆಯುವ ಉದ್ದೇಶ ಇವರದ್ದಾಗಿದೆ ಎಂದರು.

    ನಮ್ಮ ಸಂಸ್ಕೃತಿಗೆ ತಕ್ಕಂತೆ ಇರುವ ಪಠ್ಯಗಳು ಬಂದಾಗ ಇವರು ಈ ರೀತಿಯ ತೊಡಕುಗಳನ್ನೇ ಮಾಡುವುದು ಸಾಮಾನ್ಯವಾಗಿದೆ. ಇದು ಈಗಿನಿಂದ ಅಲ್ಲ, ಇಂದಿರಾಗಾಂಧಿ ಅವರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಟೆಕ್ನಿಕಲ್, ಪ್ರಿಂಟಿಂಗ್ ಮಿಸ್ಟೇಕ್ ಇದ್ದರೆ ಅದನ್ನು ಸರಿಮಾಡಿಕೊಡುತ್ತೇವೆ. ನಾವು ವಿಶಾಲ ಯೋಚನೆ ಹೊಂದಿರುವವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.ಟಿಪ್ಪು ಸುಲ್ತಾನ್​ ಅವರ ಬಗ್ಗೆ ಕಡಿಮೆಯಾಗಿ, ಕೆಂಪೇಗೌಡರ ಬಗ್ಗೆ ಜಾಸ್ತಿಯಾಗಿರುವುದಕ್ಕೆ ಕಾಂಗ್ರೆಸ್​​ನವರಿಗೆ ಬೇಜಾರು ತರಿಸಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts