ಬೆಂಗಳೂರು: ಕಳೆದ ವರ್ಷದ ವಿಶ್ವ ಎಡಚರ ದಿನದಂದು ಘೋಷಣೆಯಾಗಿತ್ತು ದಿಗಂತ್ ಅಭಿನಯದ “ಎಡಗೈ ಅಪಘಾತಕ್ಕೆ ಕಾರಣ’ ಎಂಬ ಚಿತ್ರ’. ಅಂದು ಶೀರ್ಷಿಕೆ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನು, ಈ ವರ್ಷ ವಿಶ್ವ ಎಡಚರ ದಿನದಂದು ನಾಯಕಿಯ ಪರಿಚಯ ಮಾಡಿಕೊಡಲಾಗಿತ್ತು. ಆದರೆ, ಚಿತ್ರದ ಮುಹೂರ್ತ ಮಾತ್ರ ಆಗಿರಲಿಲ್ಲ. ಅದಕ್ಕೀಗ ಕೊನೆಗೂ ಮುಹೂರ್ತ ಸಿಕ್ಕಿದೆ.
ಇದನ್ನೂ ಓದಿ: ರಣವೀರ್ಗೆ ಕಪಾಳಮೋಕ್ಷ!; ಬೆಂಗಳೂರಿನಲ್ಲಿ ನಡೆದ ಸೈಮಾ ಸಮಾರಂಭದಲ್ಲಿ ಘಟನೆ…
“ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದ ಮುಹೂರ್ತ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿದೆ. ಈ ಸಂದರ್ಭದಲ್ಲಿ ದಿಗಂತ್, ನಾಯಕಿ ಧನು ಹರ್ಷ, ನಿರ್ದೇಶಕ ಸಮರ್ಥ್ ಬಿ ಕಡಕೋಳ್, ನಿರ್ಮಾಪಕ ಗುರುದತ್ ಗಾಣಿಗ ಸೇರಿದಂತೆ ಹಲವರು ಹಾಜರಿದ್ದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಎಡಚರರು ಅನುಭವಿಸುವ ಹಲವು ಸಮಸ್ಯೆಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿರುವಂತೆ ಮಾಡಲಾಗಿರುತ್ತದೆ. ಎಡಗೈ ಬಳಕೆದಾರರ ಸಂಖ್ಯೆ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಿಷ್ಟು ತೊಂದರೆಗಳು ಎದುರಾಗುತ್ತವೆ. ಈ ವಿಷಯವನ್ನು ಕೆಮ್ ಹಿನ್ನೆಲೆಯಲ್ಲಿ ಹೇಳಲಾಗುತ್ತಿದೆ.
ಇದನ್ನೂ ಓದಿ: ಪುನಃ ಅಜ್ಜನಾದ ಖುಷಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್; ಸಂತಸ ಹಂಚಿಕೊಂಡ ಪುತ್ರಿ
ಈ ಚಿತ್ರಕ್ಕೆ ಸಮರ್ಥ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
‘ಜೊತೆಜೊತೆಯಲಿ’ ತಂಡದ ಜತೆಗಿನ ಕಿರಿಕ್ ಬಳಿಕ ಬಿಗ್ಬಾಸ್-9 ಮನೆಯೊಳಕ್ಕೆ ಅನಿರುದ್ಧ್?