More

    ನಟನೆಯೊಂದಿಗೆ ದ್ವಾರಕೀಶ್ ಸಮಾಜಕ್ಕೆ ಸಂದೇಶ ರವಾನೆ

    ಮದ್ದೂರು: ಚಿತ್ರ ನಿರ್ದೇಶಕ, ನಟ ದ್ವಾರಕೀಶ್ ಅವರು ಹಲವು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ.ಉಮಾಶಂಕರ್ ಹೇಳಿದರು.

    ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಆಯೋಜಿಸಿದ್ದ ದ್ವಾರಕೀಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವಾರಕೀಶ್ ಅವರು ತಮ್ಮ ನಟನೆಯ ಮೂಲಕ ಸಮಾಜಕ್ಕೆ ತಮ್ಮದೇ ಸಂದೇಶ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಸ್ಯ ಪಾತ್ರಗಳನ್ನು ಮಾಡುವ ಮೂಲಕ ರಾಜ್ಯದ ಮತ್ತು ರಾಷ್ಟ್ರದ ಚಿತ್ರರಸಿಕರನ್ನು ರಂಜಿಸಿದ್ದರು. ಅಂತಹ ಕಲಾವಿದನನ್ನು ಕಳೆದುಕೊಂಡಿದ್ದು ಚಿತ್ರರಂಗ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

    ಕನ್ನಡ ಚಿತ್ರರಂಗದ ಮೂಲಕ ಅಪಾರ ಸೇವೆ ಸಲ್ಲಿಸಿರುವ ದ್ವಾರಕೀಶ್ ಅವರ ಸಾವು ತುಂಬ ನೋವು ತಂದಿದೆ. ಅವರ ಅಭಿನಯ ಎಂತಹವರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ಸಮಾಜಕ್ಕೆ ಸಂದೇಶ ಸಾರುವ ವಿಷಯಗಳನ್ನು ಅವರು ಚಿತ್ರಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಅಲ್ಲದೆ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದರು. ಹಾಸ್ಯದ ಮೂಲಕ ಸಮಾಜದ ಅಂಕು-ಡೋಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದ ದ್ವಾರಕೀಶ್ ಅವರನ್ನು ನಾವು ಸದಾ ನೆನಪು ಮಾಡಿಕೊಳ್ಳಬೇಕು ಎಂದರು.

    ಕಸಾಪ ಪದಾಧಿಕಾರಿಗಳು ಹಾಗೂ ರೈತ ನಾಯಕರು ದ್ವಾರಕೀಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಚರಣೆ ಮಾಡಿ ದ್ವಾರಕೀಶ್ ಅವರಿಗೆ ಗೌರವ ಸಮರ್ಪಿಸಿದರು.

    ಪುರಸಭೆ ಸದಸ್ಯ ಎಸ್.ಮಹೇಶ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸೋ.ಶಿ.ಪ್ರಕಾಶ, ಪ್ರಭುಲಿಂಗ, ಕೆ.ಜಿ.ಉಮೇಶ, ಶಿವಲಿಂಗಯ್ಯ, ಸೀನಪ್ಪದೊಡ್ಡಿ ಶ್ರೀನಿವಾಸ, ಸೋಂಪುರ ಉಮೇಶ, ವಿ.ಎಚ್.ಶಿವಲಿಂಗಯ್ಯ, ಪಟೇಲ್ ಹರೀಶ್, ಚಾಮನಹಳ್ಳಿ ರಾಮಯ್ಯ, ಪ್ರಸನ್ನಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts