ಬೆಂಗಳೂರು: ಮಂಗಳೂರು ಡ್ರಗ್ಸ್ ಕಿಂಗ್ಪಿನ್, ಕೊಲೆ-ಕೊಲೆಯತ್ನ ಪ್ರಕರಣಗಳಲ್ಲೂ ಭಾಗಿಯಾಗಿದ್ದ ರೌಡಿಶೀಟರ್ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಮಂಗಳೂರು ಮೂಲದ ಅಸ್ಗರ್ ಅಲಿ ಸೇರಿ ಆರು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 4 ಕೆ.ಜಿ. ಚರಸ್ ಕೂಡ ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ರೌಡಿಶೀಟರ್ ಆಗಿರುವ ಅಸ್ಗರ್ ಅಲಿ, ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದು, ಕೊಲೆ-ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ: ಈ ಕರೊನಾ ವೈರಸ್ ಹೆಚ್ಚೂಕಡಿಮೆ ಹತ್ತು ವರ್ಷ ಕಾಡುತ್ತಂತೆ, ಜಗತ್ತನ್ನೇ ಗುಡಿಸಿ ಹಾಕುತ್ತಂತೆ!
ಮಂಗಳೂರಿನಲ್ಲೇ ಸುಮಾರು ಹತ್ತು ಪ್ರಕರಣಗಳಲ್ಲಿ ಬೇಕಾಗಿದ್ದ ಈ ಆರೋಪಿ ತಲೆಮರೆಸಿಕೊಂಡು 18 ವರ್ಷಗಳ ಕಾಲ ದುಬೈನಲ್ಲಿ ನೆಲೆಸಿದ್ದ. ಆದರೆ 2019ರ ಜೂನ್ನಲ್ಲಿ ಈತ ಮಂಗಳೂರಿಗೆ ವಾಪಸಾಗುವ ಕುರಿತು ಸುಳಿವು ತಿಳಿದ ಪೊಲೀಸರು ಅಂದು ಮಂಗಳೂರಿನ ಉಪ್ಪಳದಲ್ಲಿ ಬಂಧಿಸಿದ್ದರು. ಮಂಗಳೂರಿನ ಅಂದಿನ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲಾಗಿತ್ತು.
ಆದರೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದ ಆರೋಪಿ ಅಸ್ಗರ್ ಅಲಿ, ಬೆಂಗಳೂರಿನಲ್ಲಿ ಚರಸ್ ಖರೀದಿಸಿದ್ದು, ಅದನ್ನು ಮಂಗಳೂರಿಗೆ ಕೊಂಡೊಯ್ಯುತ್ತಿರುವ ಕುರಿತು ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸಿಸಿಬಿ ಪೊಲೀಸರು, ಅಸ್ಗರ್ ಅಲಿ, ದಿಲ್ ಮಯಗರ್ತಿ, ಮೀನಾ ಬುದ್ದ ಮೊಗರ, ಅನ್ವರ್ ಸಾಧತ್, ಅಬ್ದುಲ್ ಲತೀಫ್, ಮಹಮದ್ ಹನೀಫ್ ಅವರನ್ನು ಬಂಧಿಸಲಾಗಿದೆ.
ತನ್ನನ್ನು ಜೀವಂತ ಹೂತು ಬಿಡಿ ಎಂದು ಮನೆಯವರಿಂದಲೇ ಮಣ್ಣು ಹಾಕಿಸಿಕೊಂಡ ಮಹಿಳೆ!; ಎಲ್ಲ ಶಿವನನ್ನು ಮೆಚ್ಚಿಸಲು…
ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್ ಸೇಲ್ಸ್ಮ್ಯಾನ್ ಕೊನೆಗೂ ಫೇಲಾದ…