ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿನ ಪ್ರಕರಣ ಬಗೆದಷ್ಟು ಆಳ ಎಂಬಂತಾಗುತ್ತಿದೆ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನ ಬಳಿಕ ಐಂದ್ರಿತಾ ರೇ-ದಿಗಂತ್ ದಂಪತಿ, ಅಕುಲ್ಬಾಲಾಜಿ, ಸಂತೋಷ್ಕುಮಾರ್ ಸೇರಿದಂತೆ ಹಲವರು ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಇದೀಗ ಧಾರಾವಾಹಿ ನಟ-ನಟಿಯರ ಸರದಿ ಶುರುವಾಗಿದೆ.
ಹೌದು, ಡ್ರಗ್ಸ್ ಕೇಸ್ನಲ್ಲಿ ಕಿರುತೆರೆಯ ನಟ-ನಟಿಯರು, ಸಹನಟಿಯರ ಭಾಗಿ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಂಧಿತ ಡ್ರಗ್ಸ್ ಪೆಡ್ಲರ್ಗಳ ಮಾಹಿತಿ ಆಧರಿಸಿ ಈಗಾಗಲೇ ಐಎಸ್ಡಿ ಅಧಿಕಾರಿಗಳು ಕಿರುತೆರೆ ನಟಿ ಗೀತಾ ಭಾರತಿ ಭಟ್ ಮತ್ತು ಸಹ ನಟ ಅಭಿಷೇಕ್ಗೆ ಮಂಗಳವಾರ ಬೆಳಗ್ಗೆ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿರಿ ಡ್ರಗ್ಸ್ ಕೇಸ್: ಐಎಸ್ಡಿಯಿಂದ ಲೂಸ್ ಮಾದ ಯೋಗಿ, ಕ್ರಿಕೆಟರ್ ಅಯ್ಯಪ್ಪ ಮತ್ತು ಕಿರುತೆರೆ ನಟಿಯ ವಿಚಾರಣೆ
‘ಬ್ರಹ್ಮಗಂಟು’ ಧಾರಾವಾಹಿಯ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಗೀತಾ ಭಾರತಿ ಭಟ್, ಐಎಸ್ಡಿ ನೋಟಿಸ್ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ವಿಚಾರಣೆಗೆ ಹಾಜರಾದರು. ಈ ವೇಳೆ ಮಾಧ್ಯಮಗಳ ಬಳಿ ಮಾತಾಡಿದ ಗೀತಾ, ‘ನಾನು ಅಪರಾಧಿಯಲ್ಲ, ನಾನು ತಪ್ಪು ಮಾಡಿಲ್ಲ’ ಎಂದರು.
‘ಗಟ್ಟಿಮೇಳ’ ಸೀರಿಲ್ನಲ್ಲಿ ವಿಕ್ರಾಂತ್ ರೋಲ್ ಪ್ಲೇ ಮಾಡ್ತಿರೋ ಅಭಿಷೇಕ್, ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದರು. ಐಎಸ್ಡಿ ನೋಟಿಸ್ ಕೊಟ್ಟಿರುವ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಅಭಿಷೇಕ್, ‘ನೋಟಿಸ್ ಬಂದಿದೆ. ವಿಚಾರಣೆಗೆ ಕರೆದಿದ್ದಾರೆ. ಸದ್ಯ ಶೂಟಿಂಗ್ನಲ್ಲಿದ್ದೀನಿ. ಹೋಗುವೆ’ ಎಂದಿದ್ದರು. ಬೆಳಗ್ಗೆ 11ರ ಸುಮಾರಿಗೆ ವಿಚಾರಣೆಗೆ ಹಾಜರ್ ಆದರು. ಇವರಿಬ್ಬರಿಗೂ ಶಾಂತಿನಗರದ ಐಎಸ್ಡಿ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು
ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್