More

    ದ್ರೋಪತಿ ಹೇಳ್ತವ್ಳೆ: ನೀವೂ ನೋಡ್ಬೇಕಾ?; ಇಲ್ಲಿದೆ ಮಾಹಿತಿ..

    ಬೆಂಗಳೂರು: ‘ದ್ರೋಪತಿ ಹೇಳ್ತವ್ಳೆ’
    – ಹೌದು.. ಇಲ್ಲಿ ಮಹಾಭಾರತದ ದ್ರೌಪದಿ ತಾನೇ ತನ್ನ ಜೀವನದ ಮಹತ್ವದ ಸಂಗತಿಗಳನ್ನು ಹೇಳಿಕೊಳ್ಳುತ್ತಾಳೆ. ಅದನ್ನೇ ರಂಗದ ಮೇಲೆ ತಂದಿರುವಂಥ ನಾಟಕವೇ ‘ದ್ರೋಪತಿ ಹೇಳ್ತವ್ಳೆ’.

    ರಂಗಾಸ್ಥೆ ಟ್ರಸ್ಟ್​ನ ಕಲಾವಿದರು ಈ ನಾಟಕವನ್ನು ಅಭಿನಯಿಸುತ್ತಿದ್ದು, ದ್ರೌಪದಿಯೇ ತನ್ನ ಬಗ್ಗೆ ಹೇಳಿಕೊಳ್ಳುವುದು ಪ್ರಧಾನವಾಗಿದೆ. ಮಾತ್ರವಲ್ಲ, ಜಗತ್ತಿನ ಪ್ರತಿ ಮಹಿಳೆಯಲ್ಲೂ ದ್ರೌಪದಿಯ ಲಕ್ಷಣಗಳು ಇವೆ ಎಂಬುದನ್ನು ಈ ನಾಟಕದ ಮೂಲಕ ಹೇಳಲಾಗುತ್ತಿದೆ.

    ಗಣೇಶ್ ಮಂದರ್ತಿ ಅವರ ನಿರ್ದೇಶನದಲ್ಲಿ ಈ ನಾಟಕ ಸಂಗೀತ ಪ್ರಧಾನವಾಗಿದ್ದು, ಇದರಲ್ಲಿ ಜನಪದ ಮತ್ತು ಕುಮಾರವ್ಯಾಸ ಭಾರತ ಮಿಳಿತಗೊಂಡಿದೆ. ಅಲ್ಲದೆ ಇದು ಮಹಾಭಾರತವನ್ನು ದ್ರೌಪದಿಯ ದೃಷ್ಟಿಯಲ್ಲಿ ತಿಳಿದುಕೊಳ್ಳುವಂಥದ್ದಾಗಿದೆ ಎಂಬುದಾಗಿ ಈ ರಂಗತಂಡ ಹೇಳಿಕೊಂಡಿದೆ. 2 ಗಂಟೆ 30 ನಿಮಿಷಗಳ ಈ ವಿಶಿಷ್ಟ ನಾಟಕ ಫೆ. 1ರಂದು ರಾತ್ರಿ 7.30ಕ್ಕೆ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

    ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts