ಲಖನೌ: ಶಿಕ್ಷಕರ ಹಳ್ಳಿ, ಯೋಧರ ಗ್ರಾಮ ಎಂದೆಲ್ಲ ವಿಶೇಷಣಗಳೊಂದಿಗೆ ಊರನ್ನು ಕರೆಯುವುದ್ನು ಕೇಳಿರುತ್ತೇವೆ. ಅದರರ್ಥ ಆ ಊರಲ್ಲಿ ಶಿಕ್ಷಕರ ವೃತ್ತಿಯಲ್ಲಿರುವವರು, ಯೋಧರಾಗಿ ಸೇವೆ ಸಲ್ಲಿಸುತ್ತಿರುವವರುಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದೇ ಅರ್ಥ.
ಅಂತೆಯೇ ಇಲ್ಲೊಂದು ಹಳ್ಳಿಯನ್ನು ಐಎಎಸ್ ಊರು ಎಂದೇ ಕರೆಯಲಾಗುತ್ತದೆ. ಹೌದು ನಿಮ್ಮ ಊಹೆ ಸರಿಯಾದದ್ದೇ. ಈ ಊರಿನಿಂದ ಐಎಎಸ್ ಅಧಿಕಾರಿಗಳಾಗಿ ಆಯ್ಕೆಯಾದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಭಾರತದ ಯಾವುದೇ ಗ್ರಾಮಕ್ಕಿಂತಲೂ…!
ಉತ್ತರಪ್ರದೇಶದ ಜೌನ್ಪುರ ಜಿಲ್ಲೆಯ ಮಾಧವ ಪಟ್ಟಿ ಗ್ರಾಮದಲ್ಲಿ ಈವರೆಗೆ 50ಕ್ಕೂ ಹೆಚ್ಚು ಜನರು ಐಎಎಸ್, ಐಪಿಎಸ್ ಸೇರಿ ಅಖಿಲ ಭಾರತ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಇನ್ನೂ ಬ್ಯಾಂಕ್, ಇತರ ಉನ್ನತ ಹುದ್ದೆಗಳಿಗೆ ಆಯ್ಕೆಯಾದವರ ಸಂಖ್ಯೆಗಂತೂ ಲೆಕ್ಕವೇ ಇಲ್ಲ.
ಇದನ್ನೂ ಓದಿ; ಸಾವಿನಲ್ಲೂ ಗುಟ್ಟು ಬಿಟ್ಟು ಕೊಡದ ಶ್ರೀಲಂಕಾ ಗ್ಯಾಂಗ್ಸ್ಟರ್; ಎರಡು ವರ್ಷಗಳಿಂದ ಭಾರತದಲ್ಲೇ ಅಡಗಿದ್ದ…!
ಅಷ್ಟಕ್ಕೂ ಮಾಧವಪಟ್ಟಿ ಗ್ರಾಮದ ಜನ ಸಂಖ್ಯೆ ಕೇವಲ ನಾಲ್ಕು ಸಾವಿರ. ಬಹುತೇಕರು ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ವಿಶೇಷವೆಂದರೆ, ಒಂದೇ ಕುಟುಂಬದ ನಾಲ್ಕು ಜನರು ಐಎಎಸ್ ಅಧಿಕಾರಿಗಳಾಗಿದ್ದಾರೆ.
ಐಎಎಸ್ ಅಧಿಕಾರಿಗಳ ಕುಟುಂಬ: ಈ ಗ್ರಾಮದ ಠಾಕೂರ್ ಸೂರ್ಯಬಲಿ ಸಿಂಗ್ ಎಂಎ ಹಾಗೂ ಎಲ್ಎಲ್ಬಿಯಲ್ಲಿ ಟಾಪರ್ ಆಗಿದ್ದರು. ಇವರ ಸಹೋದರ ಭಗವಾನ್ ದೀನ್ ಸಿಂಹ ಸಹಿತ ಇವರ ಕುಟುಂಬದಲ್ಲಿ ಒಟ್ಟು 13 ಜನರು ಐಎಎಸ್ ಪಾಸ್ ಮಾಡಿದ್ದಾರೆ. 1960ರಲ್ಲಿ ವಿನಯಕುಮಾರ್ ಸಿಂಹ ಐಎಎಸ್ ಪಟ್ಟಿಯಲ್ಲಿ 13ನೇ ಟಾಪರ್ ಆಗಿದ್ದರು. ಇವರು ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದರು. ಅಜಯಕುಮಾರ್ ಸಿಂಹ ಹಾಗೂ ಛತ್ರಸಾಲ್ ಸಿಂಹ 1961ರಲ್ಲಿ ನಾಗರಿಕ ಸೇವೆಗೆ ಆಯ್ಕೆಯಾದರು.
ಇದನ್ನೂ ಓದಿ; ಯಾರಿಗೆ ಸಿಗುತ್ತೆ? ಯಾರಿಗೆ ಇಲ್ಲ? ಶ್ರೀಮಂತ ದೇಶಗಳಿಂದ ಮುಂಗಡ ಖರೀದಿ; 100 ಕೋಟಿ ಡೋಸ್ಗೆ ಹಣ ಪಾವತಿ
ಭಗವಾನ್ ದೀನ್ ಸಿಂಹರ ಮಗ ಇಂದ್ರಕುಮಾರ್ ಸಿಂಹ 1951ರಲ್ಲಿಯೇ ಐಎಎಸ್ ಅಧಿಕಾರಿಯಾಗಿದ್ದರು. 16 ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಹೋದರ ವಿದ್ಯಾಪ್ರಕಾಶ್ ಸಿಂಹ 1953ರಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದರು.
ಇದೇ ಕುಟುಂಬದ ಮನಸ್ವಿಕುಮಾರ್ ಸಿಂಹ್ ಪಂಜಾಬ್ ಕೇಡರ್ನಲ್ಲಿ, ಸಹೋದರ ಯಶಸ್ವಿ ಕುಮಾರ್ ಸಿಂಹ ಉತ್ತರಾಖಂಡ್ ಕೇಡರ್ ಅಧಿಕಾರಿಯಾಗಿದ್ದಾರೆ. ಹೀಗೆ ಇವರ ಕುಟುಂಬದಲ್ಲಿ 13 ಐಎಎಸ್ ಹಾಗೂ 50ಕ್ಕೂ ಅಧಿಕ ಜನರು ಗೆಜೆಟೆಡ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್ ಅಧಿಕಾರಿಯಾಗುವುದೇ ಆಗಿದೆ. ಇದಕ್ಕಾಗಿ ಅವರು 10ನೇ ತರಗತಿಯಿಂದಲೇ ಕಠಿಣ ಪರಿಶ್ರಮದಲ್ಲಿ ತೊಡಗುತ್ತಾರೆ. ವಿಪರ್ಯಾಸವೆಂದರೆ, ಈ ಹಳ್ಳಿಯಿನ್ನೂ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?