More

    ಸಾಹಸಸಿಂಹ ವಿಷ್ಣುವರ್ಧನ್​ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ತೆಲುಗು ನಟ: ತಿರುಗಿಬಿದ್ದ ಕನ್ನಡಿಗರು

    ಬೆಂಗಳೂರು: ಕನ್ನಡ ಸಿನಿಮಾ ಕ್ಷೇತ್ರದ ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್​ ಅವರ ಬಗ್ಗೆ ತೆಲುಗು ನಟ ವಿಜಯ್​ ರಂಗರಾಜು ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದು, ಇದರಿಂದ ವಿಷ್ಣುದಾದರ ಅಭಿಮಾನಿಗಳು ಕೆರಳಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ವಿಷ್ಣುದಾದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯ್​ ರಂಗರಾಜುಗೆ ಸೋಶಿಯಲ್ ಮೀಡಿಯಾದಲ್ಲೂ ಕರ್ನಾಟಕದ ಜನತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ವಿಷ್ಣು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

    ವಿಷ್ಣು ಅಭಿಮಾನಿಗಳಷ್ಟೇ ಅಲ್ಲ ಸ್ಯಾಂಡಲ್​ವುಡ್​ನ ನಟರೂ ವಿಜಯ್​ ರಂಗರಾಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಟ ಜಗ್ಗೇಶ್, ‘ನತದೃಷ್ಟ ಶಿಕಾಮಣಿ! ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯೂ ಸಲ್ಲದವ! ಅದರಲ್ಲೂ ಇವ ಕಲಾವಿದನಂತೆ ಈ ದರಿದ್ರ ಮುಖವನ್ನು ಯಾವ ಚಿತ್ರದಲ್ಲೂ ನೋಡಿದ ನೆನಪಿಲ್ಲ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ದಟತನ ಮಾತಿಗೆ ಕ್ಷಮೆ ಇಲ್ಲ. ಸತ್ತವರು ದೇವರಸಮ, ದುಃಖವಾಯಿತು!’ ಎಂದು ಖಳನಟ ವಿಜಯ್​ ರಂಗರಾಜುಗೆ ಮಾತಿನಲ್ಲೇ ತಿವಿದಿದ್ದಾರೆ.

    ಒಳ್ಳೇ ಹುಡುಗ ಪ್ರಥಮ್​ ಕೂಡ ತೆಲುಗು ಸಿನಿಮಾ ಖಳನಟನ ಹೇಳಿಕೆಯನ್ನು ಖಂಡಿಸಿದ್ದು, ‘ಅಮರವಾಗಿರೋ ಮರೆಯದ ಮಾಣಿಕ್ಯ ವಿಷ್ಣು ಸರ್ ಬಗ್ಗೆ ಕೆಟ್ಟದಾಗಿ ಮಾತಾಡೋದು ಬದುಕಿರೋ ನಿಮ್ಮಪ್ಪ-ಅಮ್ಮ, ಹೆಂಡತಿ ಬಗ್ಗೆ ಅಸಹ್ಯವಾಗಿ ಮಾತನಾಡಿದಂತೆ. ದಾದರಿಗೆ ಹೆಣ್ಣಿನ ವೀಕ್​ನೆಸ್​ ಇದ್ದಿದ್ರೆ ಮೂರ್ನಾಲ್ಕು ಮದುವೆ ಆಗಿತಿದ್ರು. ಮೇರುನಟರ ಬಗ್ಗೆ ಅಸಭ್ಯವಾಗಿ ಮಾತಾಡೋ ಮೂಲಕ ನಿಮ್ಮೊಬ್ಬರಿಗೆ ಅಲ್ಲ, ತಮಿಳುನಾಡಿಗೆ ಸೂತಕ ಮಾಡಿದ್ರಿ, ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ’ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

    ವಿಷ್ಣುವರ್ಧನ್ ಅವರ ಅಳಿಯ ಅನುರುಧ್ ಕೂಡ ತೆಲುಗು ಖಳನಟನ ಮಾತಿಗೆ ಬೇಸರ ವ್ಯಕ್ತಪಡಿಸಿದ್ದು. ಈ ರಾಜ್ಯಕ್ಕೆ ನೀವೆಂದೂ ಬರಬೇಡಿ, ಬಂದರೆ ಏನಾಗತ್ತೋ ಗೊತ್ತಿಲ್ಲ ಎಂದು ವಿಜಯ್​ ರಂಗರಾಜುಗೆ ಎಚ್ಚರಿಸಿದ್ದಾರೆ.

    ಎಚ್​.ಡಿ.ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರೊಬ್ಬ ರೈತನ ಮಗ: ಪ್ರತಾಪ್​ ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts