More

    ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಕಾಣಲಾರಂಭಿಸಿದೆ: ಡಾ. ಸಂಪದಾನಂದ ಮಿಶ್ರ

    ಬೆಂಗಳೂರು: ಭಾರತೀಯ ಭಾಷೆಗಳು ಮಾಧ್ಯಮಿಕ ಸಾಧನಗಳಾಗಿರದೆ, ಅವು ದೈವತ್ವವನ್ನು ಪ್ರತಿಪಾದಿಸುತ್ತವೆ. ರಾಷ್ಟ್ರ ಧರ್ಮವನ್ನು ಪ್ರತಿಪಾದಿಸುವುದು ಪ್ರತಿಯೊಬ್ಬರ ಕರ್ತವ್ಯ. ಇಂತಹ ಉದಾತ್ತ ಮೌಲ್ಯಗಳನ್ನು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಆದರೆ ಮೌಲ್ಯಗಳನ್ನು ಅಳವಡಿಸಿಕೊಂಡು, ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ದೇಶದಲ್ಲಿ ಹೆಚ್ಚು ಕಾಣಲಾರಂಭಿಸಿದೆ ಎಂದು ಸೋನಿಪತ್​ನ ರಿಷಿಹುಡ್​ ವಿಶ್ವವಿದ್ಯಾಲಯದ ಮಾನವಿಕ ಅಧ್ಯಯನ ಕೇಂದ್ರಗಳ ನಿರ್ದೇಶಕ, ಖ್ಯಾತ ವಿದ್ವಾಂಸ ಡಾ. ಸಂಪದಾನಂದ ಮಿಶ್ರ ಅಭಿಪ್ರಾಯಪಟ್ಟಿದ್ದಾರೆ.

    ದಿ ಮಿಥಿಕ್​ ಸೊಸೈಟಿ ಭಾನುವಾರ ಆಯೋಜಿಸಿದ್ದ ರಾವ್​ ಬಹದ್ದೂರ್​ ಸಿ. ಹಯವದನರಾವ್​ ದತ್ತಿ ಉಪನ್ಯಾಸದಲ್ಲಿ ‘ಭಾರತೀಯ ನಾಗರೀಕತೆಯ ಬುನಾದಿ: ಜ್ಞಾನದ ಅನ್ವೇಷಣೆ’ ವಿಷಯದ ಕುರಿತು ಮಾತನಾಡಿದರು.

    ಮಹರ್ಷಿ ಅರವಿಂದರು ತಮ್ಮ ಬರವಣಿಗೆಗಳಲ್ಲಿ ಭಾರತೀಯ ಜ್ಞಾನ ಪರಂಪರೆಯ ಕುರಿತು ಪ್ರಾಯೋಗಿಕವಾದ ವಿಮರ್ಶೆಯನ್ನು ನೀಡಿದ್ದಾರೆ. ಈ ದೇಶದ ಪರಂಪರೆ ಜ್ಞಾನದಾಹಿ ಪರಂಪರೆಯಾಗಿದ್ದು, ಜ್ಞಾನರ್ಜನೆಯಲ್ಲಿ ಭಾರತೀಯರು ಹೊಸ ಸವಾಲುಗಳನ್ನು ಎದುರಿಸುವುದರ ಜತೆಗೆ ಹೊಸ ಮಾಗೋರ್ಪಾಯಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಜ್ಞಾನ ಪರಂಪರೆಯ ಕಾರಣದಿಂದಲೇ ಭಾರತೀಯ ಸಂಸ್ಕೃತಿ ಇಂದಿಗೂ ಸಹ ನಿತ್ಯನೂತನವಾಗಿದೆ ಎಂದರು.

    ಜ್ಞಾನ ಪರಂಪರೆಯು ವೈವಿಧ್ಯತೆ ಮತ್ತು ಬಹುತ್ವವನ್ನು ಸದಾಕಾಲ ಪ್ರತಿಪಾದಿಸುತ್ತಲೇ ಬಂದಿದೆ. ಧರ್ಮ ಮತ್ತು ಅಧರ್ಮಗಳ ನಡುವಿನ ಅಂತರವನ್ನು ನಿರಂತರವಾಗಿ ಸ್ಪಷ್ಟಪಡಿಸುತ್ತ ಧರ್ಮ ಮಾರ್ಗವನ್ನೇ ಪೋಷಿಸುತ್ತ ಬಂದಿದೆ. ಭಾರತೀಯ ಚಿಂತಕರು ಮಾನವತಾವಾದವನ್ನು ಧರ್ಮ ಮಾರ್ಗದ ಮೂಲಕ ಪ್ರತಿಪಾದಿಸಿದರು. ಇದೇ ತತ್ವಾಜ್ಞಾನವನ್ನು ಗುರುಗಳು ಶಿಕ್ಷಣದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿದ್ದಾರೆ ಎಂದು ತಿಳಿಸಿದರು.

    ದಿ ಮಿಥಿಕ್​ ಸೊಸೈಟಿ ಕೋಶಾಧ್ಯಕ್ಷ ಕೆ.ಎನ್​. ಹಿರಿಯಣ್ಣಯ್ಯ ಮಾತನಾಡಿ, ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಸಂಸ್ಕೃತ ಭಾಷಾಧ್ಯಯನ ಜಾರಿಗೊಳಿಸುವುದು ಇಂದಿನ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ದಿ ಮಿಥಿಕ್​ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್​.ರವಿ, ಉಪಾಧ್ಯ ಡಾ.ವಿ.ಅನುರಾಧ, ಆಡಳಿತ ಮಂಡಳಿಯ ಸದಸ್ಯ ಎಂ.ಆರ್​. ಪ್ರಸನ್ನ ಕುಮಾರ್​ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts