ಬೆಂಗಳೂರು: ಧಾರ್ಮಿಕ ಸಾಹಿತ್ಯದ ಪ್ರಸಿದ್ಧ ವಿದ್ವಾಂಸರಾದ ಡಾ.ಕೆ.ಜಿ. ಸುಬ್ರಾಯ ಶರ್ಮಾರವರ 163ನೇ ಕನ್ನಡ ಗ್ರಂಥ ‘ಮನೋಮರ್ಕಟ ವಿಜಯ’ ಇತ್ತೀಚೆಗೆ ಬಿಡುಗಡೆಯಾಯಿತು. ಸಾಕಮ್ಮ ಗಾರ್ಡನ್ಸ್ನಲ್ಲಿರುವ ವೇದಾಂತ ನಿಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಸ್. ಕೃಷ್ಣಮೂರ್ತಿಯವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು.
ಭಗವದ್ಗೀತೆ, ಗೌಡಪಾದ ಮಾಂಡೂಕ್ಯ ಕಾರಿಕೆ , ಉಪನಿಷತ್ತುಗಳು ಹಾಗೂ ಸುರೇಶ್ವರರ ಕೃತಿಗಳಿಂದ ಆರಿಸಿದ ಸುಮಾರು 40 ವಾಕ್ಯಗಳಿಗೆ ಬರೆದಿರುವ ನಿರೂಪಣೆಯನ್ನು ಈ ಕೃತಿ ಒಳಗೊಂಡಿದೆ. ಗ್ರಂಥ ಪರಿಚಯವನ್ನು ಮಾಡಿದ ಅನಂತಪದ್ಮನಾಭ ಗುಪ್ತ ಅವರು ಕೃತಿಯ ಮಹತ್ವ ಮತ್ತು ಲೇಖರ ವಿದ್ವತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲಕ್ಕುಂಡಿ ಶ್ರೀಪಾದ ಭಟ್ಟರು, ಎಚ್.ಎಸ್.ಘಲ್ಗಿ, ಡಾ.ಕೆ.ಜಿ.ಸುಬ್ರಾಯ ಶರ್ಮಾ ಮತ್ತು ರಾಜೇಶ್ವರತಿ ಶರ್ಮಾ ಉಪಸ್ಥಿತರಿದ್ದರು.