ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿರುವ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪೊಲೀಸ್ ಕಾನ್ಸ್ಟೆಬಲ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಮಾರಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಪೇದೆ ಜತೆ ಅಕ್ರಮ ಸಂಬಂಧ ಹೊಂದಿದ್ದಳೆನ್ನಲಾದ ವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಮಾಡಿ ಪರಾರಿ
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಅನಂತ ಕುಮಾರ್ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಸಾವಿಗೀಡಾಗಿರುವ ವಿವಾಹಿತೆಯ ಪಾಲಕರು ಅನಂತಕುಮಾರ್ ವಿರುದ್ಧ ದೂರು ನೀಡಿದ್ದು, ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
ಗಂಡ-ಹೆಂಡಿರ ಪೇದೆ ಜಗಳ ತಂದಿಟ್ಟು, ಅದರ ದುರ್ಲಾಭ ಪಡೆದು ಅಕ್ರಮ ಸಂಬಂಧ ಹೊಂದಿದ್ದ, ನಂತರ ಇವರಿಬ್ಬರ ನಡುವೆಯೂ ಜಗಳ ನಡೆದು ಈ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಹಣದ ಆಮಿಷವೊಡ್ಡಿ ವಿವಾಹಿತೆಯನ್ನು ಗಂಡನಿಂದ ದೂರ ಮಾಡಿದ್ದ ಪೇದೆ, ಜೀವಬೆದರಿಕೆಯನ್ನೂ ಒಡ್ಡಿದ್ದ ಎಂಬ ಆರೋಪವಿದೆ.
ಪ್ರೀತಿಗೆ ಅಡ್ಡಿಯಾಗಿದ್ದ ತಂದೆಯನ್ನು ಪ್ರಿಯಕರನಿಂದ ಕೊಲ್ಲಿಸಿದ ಮಗಳು!; ಮನೇಲಿ ಅಪ್ಪ ಒಬ್ರೇ ಇದ್ದಾರೆ ಅಂತ ಕರೆಸಿ ಕೊಲ್ಲಿಸಿದ್ಲು…
ಪ್ರೀತಿಸುತ್ತಿದ್ದವನಿಗೆ ಹೆದರಿಸಲು ಗೆಳೆಯನಿಗೆ ಹೇಳಿದ್ಲು, ಟಾರ್ಗೆಟ್ ಮಿಸ್ ಆಗಿ ಆಗಿದ್ದೇ ಬೇರೆ; ಅತ್ತ ದೂರು ಕೊಟ್ಟು ತಾನೇ ಸಿಕ್ಕಿಬಿದ್ದ ಪ್ರಿಯಕರ!