ದಾವಣಗೆರೆ: ರಾಜ್ಯದ ಕೆಲವು ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿನ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬಂದು, ಖಾತೆದಾರರು ಸಂಕಷ್ಟದಲ್ಲಿರುವ ಬೆನ್ನಿಗೇ ಇಲ್ಲೊಂದು ಕಡೆ ಖಾತೆದಾರರು ಆತಂಕಕ್ಕೆ ಒಳಗಾಗಿ, ಪಿಗ್ಮಿ ಕಟ್ಟಲಾಗಿದ್ದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮುಗಿಬಿದ್ದ ಪ್ರಕರಣ ವರದಿಯಾಗಿದೆ.
ದಾವಣಗೆರೆ ಜಿಲ್ಲೆ ಹರಿಹರದ ಮಸೀದಿ ಕಾಂಪ್ಲೆಕ್ಸ್ನಲ್ಲಿರುವ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ ಶಾಖೆಯಲ್ಲಿ ಖಾತೆದಾರರು ಮುಗಿಬಿದ್ದು, ಠೇವಣಿ, ಉಳಿತಾಯ ಹಾಗೂ ಪಿಗ್ಮಿ ಹಣವನ್ನು ಕೂಡ ಹಿಂದಿರುಗಿಸುವಂತೆ ಪಟ್ಟು ಹಿಡಿದರು. ಕಳೆದ ಎರಡು ವರ್ಷಗಳಿಂದ ಠೇವಣಿ, ಉಳಿತಾಯ, ಪಿಗ್ಮಿ ಹಣ ಹಿಂದಿರುಗಿಸಲು ಈ ಬ್ಯಾಂಕ್ ಸಿಬ್ಬಂದಿ ಪೀಡಿಸುತ್ತಿದ್ದರು. ಬ್ಯಾಂಕ್ ನಷ್ಟದಲ್ಲಿರುವ ಕುರಿತು ಶಾಖಾ ವ್ಯವಸ್ಥಾಪಕ ಸಾದಿಕ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಬ್ಯಾಂಕ್ ಶಾಖಾ ಕಚೇರಿಯನ್ನು ಸ್ಥಳಾಂತರಿಸಲು ಸಿಬ್ಬಂದಿ ಸಿದ್ಧತೆ ನಡೆಸಿದ್ದು, ಬ್ಯಾಂಕ್ ವ್ಯವಹಾರದ ಕುರಿತು ಖಾತೆದಾರರಲ್ಲಿ ಅನುಮಾನ ಹಾಗೂ ಆತಂಕ ಮೂಡಿದೆ.
ಹೀಗಾಗಿ ಬ್ಯಾಂಕ್ ಕಚೇರಿಯತ್ತ ಧಾವಿಸಿದ ಖಾತೆದಾರರು ಕೂಡಲೇ ಠೇವಣಿ ಪಾವತಿಸಲು ಪಟ್ಟು ಹಿಡಿದಿದ್ದಲ್ಲದೆ, ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸಲು ಒತ್ತಾಯಿಸಿದರು. ಆದರೆ ಬ್ಯಾಂಕ್ ಅಧ್ಯಕ್ಷ ಎಸ್. ಖಾಲಿದ್ ಮೂರು ದಿನಗಳ ನಂತರ ಬರುವುದಾಗಿ ಫೋನ್ ಮೂಲಕ ಖಾತೆದಾರರಿಗೆ ಮಾಹಿತಿ ರವಾನಿಸಿದ್ದಾರೆ. ಇದರಿಂದ ಖಾತೆದಾರರು ಮತ್ತಷ್ಟು ಸಿಟ್ಟುಹೊಂಡಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಪೆಟ್ರೋಲ್ ಬೆಲೆ ಏರಿತು ಅಂತ ಬೈಯೋದೇಕೆ? ಎಲ್ಲದಕ್ಕೂ ಸೊಲ್ಯೂಷನ್ ಇದೆ ಎಂದವ ಮಾಡಿದ ಈ ಪ್ಲ್ಯಾನ್ ಈಗ ಸಕತ್ ವೈರಲ್!
ಸೆಕ್ಸ್ ವಿಡಿಯೋ ಬಹಿರಂಗ: ಜಾರಕಿಹೊಳಿ ಪರ ವಾಲ್ಮೀಕಿ ಪೀಠದ ಸ್ವಾಮೀಜಿ ಬ್ಯಾಟಿಂಗ್!