ದೋರನಹಳ್ಳಿ: ವಲಯದ ವಿವಿಧೆಡೆ ಭಾನುವಾರ ಒಂದು ತಾಸಿಗೂ ಹೆಚ್ಚು ಬಿರುಗಾಳಿಸಹಿತ ಭಾರಿ ಮಳೆಯಾಗಿದೆ. ಮನೆಯಿಂದ ಹೊರಬಾರದಂತೆ ಬೀಸಿದ ಗಾಳಿಗೆ ಪತ್ರಾಸ್ ಶೆಡ್ಗಳು ಹಾರಿ ಹೋಗಿವೆ. ಬಿರುಗಾಳಿಯಿಂದ ಕಣ್ಣಿಗೆ ಮಣ್ಣು ಬಿದ್ದು ನಾಲ್ಕು ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೋರನಹಳ್ಳಿಯಲ್ಲಿ ಭೀರಪ್ಪ ಕೊಂತಲ್ ಅವರ ಗ್ರಾಮ ಒನ್ ಕೇಂದ್ರದ ಪತ್ರಾಸ್ಗಳು ಹಾರಿ ಹೋಗಿದ್ದು, ಕಂಪ್ಯೂಟರ್, ಬ್ಯಾಟರಿ, ಯುಪಿಎಸ್, ದಾಖಲೆಗಳು ಹಾಳಾಗಿವೆ. ಒಂದು ಲP್ಷÀಕ್ಕೂ ಹೆಚ್ಚು ನಷ್ಟವಾಗಿದೆ.