More

    ಆಧಾರ್‌ಕಾರ್ಡ್ ಆಧರಿಸಿ ಮನೆ ಬಾಗಿಲಿಗೆ ಸಾಲ

    ಚಿತ್ರದುರ್ಗ: ಮಹಿಳಾ ಸಬಲೀಕರಣ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಉದ್ದೇಶವಾಗಿದೆ ಎಂದು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಡೆಟ್‌ನ ವಲಯ ವ್ಯವಸ್ಥಾಪಕ ಐ.ಎಂ.ಮಂಜುನಾಥ ಹೇಳಿದರು.

    ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ ನಗರದ ಶ್ರೀ ಗಂಗಾಂಭಿಕಾ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಹ ಣಕಾಸು ನಿರ್ವಹಣೆ ತಿಳಿವಳಿಕೆ ಕಾರ್ಯಾಗಾರದಲ್ಲಿ ಮಾತಾನಾಡಿದ ಅವರು,ಸಣ್ಣ ಹಣಕಾಸು ಸಂಸ್ಥೆಗಳ ಸಾಲಕ್ಕೆ ಆಸ್ತಿ ಪತ್ರ ಇತ್ಯಾದಿ ದಾ ಖಲೆಗಳ ಅಗತ್ಯವಿಲ್ಲ. ಆಧಾರ್‌ಕಾರ್ಡ್ ತೆಗೆದುಕೊಂಡು ಮನೆ ಬಳಿಗೆ ಸಾಲ ವಿತರಿಸಿ,ಮರುಪಾವತಿಯನ್ನು ಮಾಡಿಕೊಳ್ಳುತ್ತವೆ ಎಂದರು.

    ಹಣಕಾಸು ಸಮಲೋಚಕ ತಿಪ್ಪೇಸ್ವಾಮಿ ಅವರು,ಸಾಲ ನಿರ್ವಹಣೆ ಅರಿವು ಮೂಡಿಸಿದರು. ರುಡ್‌ಸೆಟ್ ಸಂಸ್ಥೆ ಹಿರಿಯ ಉಪನ್ಯಾಸಕ ಉದಯ್ ಕುಮಾರ್ ಅವರು ಸ್ವಯಂ ಉದ್ಯೋಗಗಳ ಕುರಿತು ಮಾತನಾಡಿದರು. ಸೌತ್ ಎಂಎಫ್‌ಐಎನ್ ಎವಿಪಿ ಪಿ.ಎಂ.ಕಮಲೇಶ್, ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ಸಿಇಒ ವಿ.ಎನ್.ಹೆಗಡೆ,ಲೋಕಪಾಲ ಆರ್.ವಿ ಕುಲಕರ್ಣಿ,ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಏರಿಯಾ ಮ್ಯಾನೇಜರ್ ಎಸ್.ಪಿ.ರಾಜಶೇಖರ್,ಬ್ರಾಂಚ್ ಮ್ಯಾನೇಜರ್ ತಿರುಮಲೇಶ್,ಹರೀಶ್‌ಕುಮಾರ್,ವಿಠಲ್,ಭರತ್ ಕುಮಾರ್,ಜಗದಾಂಬ,ರಾಜಮ್ಮ,ರಾಜೇಶ್ವರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts