ರಾಯಚೂರು: ಮೀಸಲಾತಿ, ಒಳಮೀಸಲಾತಿ ವಿಚಾರವನ್ನೇ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದೇ ವಿಚಾರವಾಗಿ ಕಾಂಗ್ರೆಸಿಗರಿಗೆ ಸವಾಲೆಸೆದಿದ್ದಾರೆ. ರಾಯಚೂರಿನಲ್ಲಿ ಇಂದು ಮಾತನಾಡಿದ ಅವರು ಈ ವಿಷಯವಾಗಿ ಮಾತನಾಡಿದ್ದಾರೆ.
ನಾವು ಮಾಡಿರುವ ಮೀಸಲಾತಿ, ಒಳಮೀಸಲಾತಿ ಜನರ ಕೂಗು. ರಾಜಕೀಯ ಇಚ್ಛಾಶಕ್ತಿಯಿಂದ ಅದನ್ನು ಮಾಡಿದ್ದೇವೆ, ಅದರ ಲಾಭವನ್ನ ಮುಂದೆ ಪಡೆದುಕೊಳ್ಳಬೇಕಿದೆ. ಈ ವಿಚಾರವನ್ನು ಮನೆಮನೆಗೆ ತೆರಳಿ ತಿಳಿಸಬೇಕು. ದೊಡ್ಡ ಸಾಮಾಜಿಕ ಬದಲಾವಣೆ ಆಗಬೇಕು. ಹಿಂದೆ ಬಸವಣ್ಣನವರು ಮಾಡಿದ ಹಾಗೆ ಕಲಿಯುಗದಲ್ಲೂ ಆಗಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!
ಕಾಂಗ್ರೆಸ್ನವರು ನಾವು ಮೀಸಲಾತಿ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ. ಜನರು ನಿಮಗೆ ಅಂಥ ಅನಿಷ್ಠ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ನಾನು ಎಚ್ಚರಿಕೆ ಕೊಡುತ್ತೇನೆ, ಬೇಕಿದ್ದರೆ ಮುಟ್ಟಿ ನೋಡಿ. ಮೀಸಲಾತಿಯನ್ನು ಮುಟ್ಟಿದರೆ ಹಳ್ಳಿಹಳ್ಳಿಯಲ್ಲಿ ಕಾಂತ್ರಿಯಾಗುತ್ತದೆ. ಈ ಜನಾಂಗ ಎದ್ದು ನಿಂತರೆ ನೀವು ಎಲ್ಲರೂ ರಾಜಕೀಯ ಕ್ಷೇತ್ರದಿಂದ ಮಾಯವಾಗುತ್ತೀರಿ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್
ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಬೆಳೆಯಬೇಕು. ಸೂರ್ಯ-ಚಂದ್ರ ಇರುವವರೆಗೂ ಯಾರೂ ಅದನ್ನು ಮುಟ್ಟಲು ಸಾಧ್ಯವಿಲ್ಲ. ಬಡತನದಲ್ಲಿ ಹುಟ್ಟಿದರೂ ಸ್ವಂತ ಶಕ್ತಿಯಿಂದ ಸ್ವಾವಲಂಬನೆಯ ಬದುಕು ಬದುಕಬೇಕು. ಯಾರಿಗೆ ಸ್ವಾಭಿಮಾನದ ಬದುಕು ಸಿಕ್ಕಿಲ್ಲ ಅವರು ಶಾಪಗ್ರಸ್ತರು, ಅವರ ಶಾಪ ವಿಮುಕ್ತಿ ಮಾಡಲು ನಿರ್ಧಾರ ಮಾಡಿದ್ದೇವೆ. ಚುನಾವಣೆ ವಿಚಾರ ಏನೇ ಇರಲಿ, ಬದಲಾವಣೆ ತರುವ ಶಕ್ತಿ ಜನರಲ್ಲಿದೆ, ನಿಮ್ಮಲ್ಲಿದೆ.. ಏಳಿ ಎದ್ದೇಳಿ ಒಂದಾಗಿ ಎಂದು ಬೊಮ್ಮಾಯಿ ಕರೆ ನೀಡಿದರು.
ಕೋವಿಡ್ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!