More

    ಬಾಣಂತಿ ನಾಯಿಯನ್ನು ಚೀಲದಲ್ಲಿ ಹಾಕಿ ಕಾಡಲ್ಲಿ ಬಿಟ್ಟ ನಿಷ್ಕರುಣಿಗಳು

    ಕುಂದಾಪುರ: ತಾಲೂಕಿನ ಶಂಕರನಾರಾಯಣ ಸಮೀಪ 74ನೇ ಉಳ್ಳೂರು ಬಳಿ ಯಾರೋ ಹೆಣ್ಣು ನಾಯಿಯನ್ನು ಚೀಲದಲ್ಲಿ ಹಾಕಿ ಉಳ್ಳೂರು ಬಳಿ ಬಿಸಾಕಿ ಹೋಗಿದ್ದಾರೆ. ಚೀಲದಲ್ಲಿ ಯಾವುದೋ ವಸ್ತು ಮಿಸುಕಾಡುವಂತೆ ಕಂಡಿದ್ದರಿಂದ ಪರಿಸರದ ಜನ ಚೀಲ ಬಿಡಿಸಿ ನೋಡಿದಾಗ ನಾಯಿ ಅಸಹಾಯಕ ಸ್ಥಿತಿಯಲ್ಲಿತ್ತು.

    ಹೊಟ್ಟೆಗಿಲ್ಲದೆ ಮೂಳೆ ಹಂದರವಾಗಿದ್ದ ನಾಯಿ ಮೊಲೆಯಲ್ಲಿ ಜಿನುಗುವ ಹಾಲು ಕಂಡು ಮರಿ ಹಾಕಿದ ನಾಯಿ ಎಂದು ಗೊತ್ತಾಗಿದೆ. ನಿಲ್ಲಲು ಆಗದಿದ್ದರೂ ತನ್ನ ಮರಿಗಾಗಿ ಹಂಬಲಿಸುವ ಮಾತೃ ಹೃದಯ ರೋಧನೆ ಕರುಳು ಹಿಂಡುತ್ತದೆ. ಚೀಲದಲ್ಲಿ ಕಟ್ಟಿ ತಂದಿದ್ದರಿಂದ ನಾಯಿ ತನ್ನ ಮರಿ ಇರುವ ಜಾಗಕ್ಕೆ ಹುಡುಕಿ ಹೋಗುವುದಕ್ಕೂ ಆಗುತ್ತಿಲ್ಲ.

    ನಾಯಿ ಪರಿಸ್ಥಿತಿ ಕಂಡು ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ನಾಯಿಗೆ ಅನ್ನ ಹಾಕುತ್ತಿದ್ದಾರೆ. ನಾಯಿಗೆ ರೇಬಿಸ್, ಕ್ಯಾಲ್ಸಿಯಂ ಇಂಜೆಕ್ಷನ್ ಹಾಗೂ ಹೊಟ್ಟೆ ಹುಳುವಿಗೆ ಮದ್ದು ನೀಡಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts