More

    ಹಲ್ಲೆಕೋರರಿಂದ ತುಂಡಾಗಿದ್ದ ಎಎಸ್ಐ ಕೈ ಯಶಸ್ವಿ ಮರುಜೋಡಣೆ: ವೈದ್ಯರಿಂದ ಸತತ ಏಳೂವರೆ ತಾಸು ಶಸ್ತ್ರಚಿಕಿತ್ಸೆ

    ಪಟಿಯಾಲಾ: ಸಿಖ್ಖರ ನಿಹಾಂಗ್​ ಪಂಗಡದ ಅನುಯಾಯಿಗಳ ಮಾರಣಾಂತಿಕ ಹಲ್ಲೆಯಿಂದ ತುಂಡಾಗಿದ್ದ ಎಎಸ್​ಐ ಕೈಯನ್ನು ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ.

    ಚಂಡಿಗಢ್​ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯ (ಪಿಜಿಐ) ವೈದ್ಯರು ಸತತ ಏಳೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತುಂಡಾಗಿದ್ದ ಎಡಗೈಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ತರಕಾರಿ ಮಾರುಕಟ್ಟೆಯಲ್ಲಿ ಕರ್ತವ್ಯದಲ್ಲಿದ್ದ 50 ವರ್ಷದ ಎಎಸ್​ಐ ಹರ್ಜಿತ್​ ಸಿಂಗ್​ ಮೇಲೆ ದಾಳಿ ನಡೆಸಿದ್ದ ನಿಹಾಂಗ್​ಗಳು ಅವರ ಎಡಗೈಯನ್ನು ಕತ್ತರಿಸಿ ಹಾಕಿದ್ದರು.

    ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೈಯನ್ನು ಯಶಸ್ವಿಯಾಗಿ ಮರುಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ, ಹರ್ಜಿತ್​ ಸಿಂಗ್​ ಜತೆಗೂ ಮಾತನಾಡಿದ್ದು, ಅವರು ಕೂಡ ಲವಲವಿಕೆಯಿಂದ ಇದ್ದಾರೆ. ಅವರು ಇನ್ನೂ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಪಂಜಾಬ್​ ಡಿಜಿಪಿ ದಿನಕರ್​ ಗುಪ್ತಾ ಹೇಳಿದ್ದಾರೆ.

    ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಪಟಿಯಾಲಾದ ತರಕಾರಿ ಮಾರುಕಟ್ಟೆಯಲ್ಲಿ ಹರ್ಜಿತ್​ ಸಿಂಗ್​ ಹಾಗೂ ಮಾರುಕಟ್ಟೆ ಸಿಬ್ಬಂದಿ ಜತೆ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ನಿಹಾಂಗ್​ಗಳ ಗುಂಪನ್ನು ತಡೆದ ಸಿಬ್ಬಂದಿಯೊಬ್ಬ ಪಾಸ್​ ನೀಡುವಂತೆ ಕೇಳಿದ್ದಾರೆ. ಪಂಜಾಬ್​ನಲ್ಲಿ ಕರೊನಾ ಹಿನ್ನೆಲೆ ಕಫ್ಯೂ ವಿಧಿಸಲಾಗಿದ್ದು, ಜನರು ಹೊರಗೆ ಬರಲು ಪಾಸ್​ ಅಗತ್ಯವಾಗಿದೆ. ಆದರೆ, ಪಾಸ್​ ಹೊಂದಿಲ್ಲದ ಗುಂಪಿಗೆ ಪ್ರವೇಶ ನಿರಾಕರಿಸಿದಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮಾರುಕಟ್ಟೆಗೆ ನುಗ್ಗಿದ್ದಾರೆ. ಅವರನ್ನು ತಡೆದ ಹರ್ಜಿತ್​ ಸಿಂಗ್​​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಗುಂಪು ಅವರ ಎಡಗೈಯನ್ನು ಕತ್ತರಿಸಿತ್ತು. ಬಳಿಕ ಸಮೀಪದ ಹಳ್ಳಿಯ ಗುರುದ್ವಾರದಲ್ಲಿ ಅಡಗಿದ್ದ ಹಲ್ಲೆಕೋರರನ್ನು ಭಾರಿ ಪೊಲೀಸ್​ ಪಡೆ ಬಳಸಿ ಬಂಧಿಸಲಾಗಿತ್ತು.

    ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಾಕ್​ಡೌನ್​ನಿಂದಾಗಿ ಜನರು ಸಾಯಲಿದ್ದಾರೆ: ಪಾಕ್​ ಪ್ರಧಾನಿ ಎಚ್ಚರಿಕೆ ನೀಡಿದ್ದೇಕೆ?

    ಲಾಕ್‌ಡೌನ್‌ ಕುರಿತು ದೇಶವನ್ನುದ್ದೇಶಿಸಿ ನಾಳೆ ಪ್ರಧಾನಿ ಭಾಷಣ: ಬೆಳಗ್ಗೆ 10 ಗಂಟೆಗೆ ಜನರ ಪ್ರಶ್ನೆಗಳಿಗೆ ಬೀಳಲಿದೆ ತೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts