ಚೆನ್ನೈ: ತಮಿಳುನಾಡು ಮೂಲದ ವೈದ್ಯನೊಬ್ಬ ಪತ್ನಿಯ ಗಂಟಲು ಸೀಳಿ, ಆಕೆಯ ಮೇಲೆ ತನ್ನ ಕಾರು ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಕೀರ್ತನಾ (28) ಎಂದು ಗುರುತಿಸಲಾಗಿದೆ. ಆರೋಪಿ ವೈದ್ಯ ಡಾ. ಗೋಕುಲ್ ಕುಮಾರ್ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ, ಮಾವನ ಮೇಲೆಯೂ ಹಲ್ಲೆ ಮಾಡಿ ಎಸ್ಕೇಪ್ ಆಗುವಾಗ ಆರೋಪಿಯ ಕಾರು ಅಪಘಾತಕ್ಕೀಡಾಗಿದೆ.
ಮೃತ ಕೀರ್ತನಾ ಕಾಂಚಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಎಚ್ಆರ್ ಆಗಿದ್ದರು. ಆರೋಪಿ ಗೋಕುಲ್ ಪೊಥೇರಿ ಬಳಿ ಆಸ್ಪತ್ರೆಯ ವೈದ್ಯ. ಲಾಕ್ಡೌನ್ ಬಳಿಕ ಗೋಕುಲ್ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ. ಕೀರ್ತನಾರ ಹಿರಿಯಕ್ಕ ಗೋಕುಲ ಅವರ ಹಿರಿಯ ಸಹೋದರನನ್ನು ವರಿಸಿದ್ದಾರೆ. ಮದುವೆ ವೇಳೆ ಕೀರ್ತನಾ ಮತ್ತು ಗೋಕುಲ್ ಪ್ರೀತಿಯಲ್ಲಿ ಬಿದ್ದು, ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಇದನ್ನೂ ಓದಿರಿ: ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!
ಮದುವೆಯ ಬಳಿಕ ಕೀರ್ತನಾ ಪಾಲಕರೊಂದಿಗೆ ಗೋಕುಲ್ ಮಾತುರಾಂಟಕಂ ಬಳಿಯ ಆನಂದ ನಗರಕ್ಕೆ ತೆರಳಿ ನೆಲೆಸಿದ್ದರು. ಸ್ಥಳೀಯರ ಪ್ರಕಾರ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತಂತೆ. ಅದರಲ್ಲೂ ಲಾಕ್ಡೌನ್ನಲ್ಲಿ ಗೋಕುಲ್ ಕೆಲಸ ಬಿಟ್ಟ ಬಳಿಕ ನಿತ್ಯವು ಜಗಳ ನಡೆಯುತ್ತಿತ್ತಂತೆ. ಅಲ್ಲದೆ, 6 ತಿಂಗಳ ಹಿಂದೆ ಇಬ್ಬರು ಡಿವೋರ್ಸ್ಗಾಗಿ ಅರ್ಜಿ ಸಹ ಸಲ್ಲಿಸಿದ್ದರು. ಆದರೂ ಇಬ್ಬರು ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೀರುವಾಗ ಶುಕ್ರವಾರ ಸಂಜೆ 4.30ರ ಸುಮಾರಿಗೆ ದಂಪತಿ ನಡುವೆ ಕಲಹ ಶುರುವಾಗಿದೆ. ಈ ವೇಳೆ ಗೋಕುಲ್ ಚಾಕು ತೆಗೆದುಕೊಂಡು ಮೊದಲು ಕೀರ್ತನಾರ ಗಂಟಲನ್ನು ಸೀಳಿದ್ದಾನೆ. ಈ ವೇಳೆ ಕೀರ್ತನಾಳ ತಂದೆ ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಗೋಕುಲ್ ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಬಳಿಕ ಕೀರ್ತನಾರ ಕೂದಲು ಹಿಡಿದುಕೊಂಡು ಹೊರಗೆ ಎಳೆದುತಂದು ಆಕೆಯ ಮೇಲೆ ಕಾರು ಹರಿಸಿ ಕೊಂದಿದ್ದಾನೆ. ಬಳಿಕ ಅದೇ ವಾಹನದಲ್ಲಿ ಎಸ್ಕೇಪ್ ಆಗುವಾಗ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಕಾರು ನಿಲ್ಲಿಸದೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಕೀರ್ತನಾ ಮತ್ತು ಅವರ ತಂದೆಯನ್ನು ಸ್ಥಳೀಯರು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಕೀರ್ತನಾ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿರುವ ತಂದೆಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿರಿ: ಫೇಸ್ಬುಕ್ನಲ್ಲಿ ಲವ್ ಮಾಡಿ ಯುವಕನನ್ನು ಮದ್ವೆಯಾದ ತೃತೀಯಲಿಂಗಿಯ ಬಾಳು ಇದೀಗ ಗೋಳು..!
ಆರೋಪಿ ಎಸ್ಕೇಪ್ ಆಗುವುದನ್ನು ತಡೆಯಲು ಪೊಲೀಸರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಚ್ಚರಿಕೆ ನೀಡಲು, ಪೊಲೀಸರನ್ನು ನೋಡಿದ ಆರೋಪಿ ಅರ್ಥುರ್ ಟೋಲ್ ಬೂತ್ ಬಳಿ ವೇಗವಾಗಿ ಟರ್ನ್ ಮಾಡಿದಾಗ ಕಾರು ಉರುಳಿಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೋಕುಲ್ ಅನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
VIDEO| ಆನೆಯ ಮೇಲೆ ಬೆತ್ತಲಾದ ಮಾಡೆಲ್: ಆಕೆ ಕೊಟ್ಟ ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!
VIDEO| ಸೇತುವೆಯಿಂದ ಬಸ್ ಮೇಲೆ ಬಿದ್ದ ಕಬ್ಬಿಣ ತುಂಬಿದ ಟ್ರಕ್: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!
ಈ ಅಂಡರ್ವೇರ್ ತೊಳೆಯೋದೇ ಬೇಡ್ವಂತೆ!; ವಾರಗಟ್ಟಲೆ ಒಂದನ್ನೇ ಹಾಕಿದ್ರೂ ನೋ ಪ್ರಾಬ್ಲಮ್!