More

    ಶಾಸಕ ಮುನಿರತ್ನಗೆ ಶಾಕ್​ ನೀಡಿದ ಡಿಕೆ ಬ್ರದರ್ಸ್​​; RRನಗರ ಕ್ಷೇತ್ರದಲ್ಲಿ ಆಪರೇಷನ್​ ಹಸ್ತ

    ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೃತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದವರ ಪೈಕಿ ಒಬ್ಬರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹಾಗೂ ಅವರ ಸಹೋದರ ಸಂಸದ ಸುರೇಶ್​ ದೊಡ್ಡ ಶಾಕ್​ ನೀಡಿದ್ದಾರೆ.

    ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಕಾರ್ಯಪ್ರವೃತ್ತರಾಗಿರುವ ಡಿಕೆ ಬ್ರದರ್ಸ್​ ಕಾಂಗ್ರೆಸ್​​ನಿಂದ ದೂರ ಉಳಿದಿದ್ದವರನ್ನು ವಾಪಸ್​ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಇದರ ಫಲವಾಗಿ ಶಾಸಕ ಮುನಿರತ್ನ ಪರಮಾಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಬಿಬಿಎಂಪಿ ಸದಸ್ಯರುಗಳಾದ ವೇಲು ನಾಯ್ಕರ್​, ಮೋಹನ್​ ಕುಮಾರ್​ ಹಾಗೂ ಶ್ರೀನಿವಾಸ ಮೂರ್ತಿ ಬಿಜೆಪಿ ತೊರೆದು ಜುಲೈ 23ರಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

    RR Nagar Congress Joining

    ಇದನ್ನೂ ಓದಿ: ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಸುತ್ತಾಟ; ಇಲಿ ಪಾಷಾಣ ತಿಂದು ಪ್ರಾಣ ಬಿಟ್ಟ ಯುವತಿ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ KGFನಿಂದ ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್​ ಟಿಕೆಟ್​ ಬಯಸಿದ್ದರು. ಆದರೆ, ಅವರಿಗೆ ಟಿಕೆಟ್​ ನಿರಾಕರಿಸಲಾಗಿತ್ತು. ಟಿಕೆಟ್​ ಸಿಗದೆ ಅತೃಪ್ತರಾಗಿದ್ದ ವೇಲು ನಾಯ್ಕರ್​ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

    ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​, ಸಂಸದ ಡಿ.ಕೆ. ಸುರೇಶ್​, ಆರ್​ಆರ್​ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ರವಿ ಉಪಸ್ಥಿತರಿದ್ದರು.

    RR Nagar Congress Joining

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts