More

    ಕನಕಗಿರಿ ಉತ್ಸವ ಅಂಗವಾಗಿ ಮಾಧ್ಯಮ ತಂಡಗಳ ಕ್ರಿಕೆಟ್​

    ಕೊಪ್ಪಳ: ಕನಕಗಿರಿ ಉತ್ಸವ ಅಂಗವಾಗಿ ಜಿಲ್ಲಾಡಳಿತ, ವಾರ್ತಾ ಇಲಾಖೆ, ಕ್ರೀಡಾ ಇಲಾಖೆಯಿಂದ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕ್ರಿಕೆಟ್​ ನಡೆಯಿತು. ಪತ್ರಕರ್ತ ಪ್ರಮೋದ್​ ನೇತೃತ್ವದ ತಂಡ ಜಯ ಸಾಧಿಸಿತು.

    ಜಿಲ್ಲಾಧಿಕಾರಿ ನಲಿನ್​ ಅತುಲ್​, ಎಸ್ಪಿ ಯಶೋದಾ ವಂಟಗೋಡಿ ಪತ್ರಕರ್ತರಿಗೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಡಿಸಿ, ನಿತ್ಯ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರಿಕೆಟ್​ ಆಯೋಜಿಸಲಾಗಿದೆ. ಕ್ರೀಡೆಯಿಂದ ಒತ್ತಡ ನಿವಾರಣೆ ಆಗಲಿದೆ. ಕ್ರೀಡಾ ಸ್ಪೂರ್ತಿಯಿಂದ ಆಡವಾಡಿ ಎಂದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್​ ಜಾಬಗೌಡ್ರ, ವಾರ್ತಾ ಇಲಾಖೆ ನೌಕರರಾದ ಎಂ.ಅವಿನಾಶ, ತಿಪ್ಪಯ್ಯ ನಾಯ್ಡು ಇದ್ದರು.

    ಮೊದಲು ಬ್ಯಾಟ್​ ಮಾಡಿದ ಪತ್ರಕರ್ತರ ಸಿರಾಜ್​ ಬಿಸರಳ್ಳಿ ನೇತೃತ್ವದ ತಂಡ 8 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 75ರನ್​ ಸೇರಿಸಿತು. ನಂತರ್​ ಬ್ಯಾಟ್​ ಮಾಡಿದ ಪ್ರಮೋದ್​ ನೇತೃತ್ವದ ತಂಡ 4 ವಿಕೆಟ್​ ನಷ್ಟಕ್ಕೆ 76ರನ್​ ಗಳಿಸಿ ಜಯಶಾಲಿಯಾಯಿತು. ಅಂತಿಮ ಕ್ಷಣದವರೆಗೂ ಪಂದ್ಯ ಮುಂದುವರೆದಿದ್ದು ರೋಚಕ ಹಣಾಹಣಿಗೆ ಸಾಯಾಯಿತು.

    ಫೆ.28ರಂದು ವಿವಿಧ ಕ್ರೀಡೆಗಳು
    ಉತ್ಸವ ಅಂಗವಾಗಿ ಫೆ.28ರಂದು ಬೆಳಗ್ಗೆ ಕನಕಗಿರಿ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೊಸ ಬಿಲ್ಡಿಂಗ್​ ಆವರಣದಲ್ಲಿ ಪುರುಷ ಮತ್ತು ಮಹಿಳಾ ಮುಕ್ತ ಕುಸ್ತಿ ಹಾಗೂ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ಹ್ಯಾಂಡಬಾಲ್​ ಪಂದ್ಯಾವಳಿ ಏರ್ಪಡಿಸಲಾಗಿದೆ. ಕನಕಗಿರಿಯ ಕರ್ನಾಟಕ ಪಬ್ಲಿಕ್​ ಸ್ಕೂಲ್​ ಆವರಣದಲ್ಲಿ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ಬಾಲ್​ ಬ್ಯಾಡ್ಮಿಂಟನ್​ ಹಾಗೂ ಮಲ್ಲಕಂಬ ಪ್ರದರ್ಶನ ಇರಲಿದೆ. ಸಂಜೆ 5ಗಂಟೆಗೆ ಕರ್ನಾಟಕ ಪಬ್ಲಿಕ್​ ಸ್ಕೂಲ್​ ಆವರಣದಲ್ಲಿ ಆಹ್ವಾನಿತ ನ್ಯಾಷನಲ್​ ತಂಡದಿಂದ ವಾಲಿಬಾಲ್​ ಪ್ರದರ್ಶನ, ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಮತ್ತು ವಾಲಿಬಾಲ್​ ಪಂದ್ಯಗಳಿರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts