More

    ವಿಶೇಷ ಚೇತನರ ಬಾಳು ಬೆಳಗಿದ ಗವಿಮಠ, 21 ಜೋಡಿಗೆ ಸಾಮೂಹಿಕ ಮದುವೆ

    ಕೊಪ್ಪಳ: ನಗರದ ಗವಿಮಠ ಆವರಣದಲ್ಲಿ 21 ವಿಶೇಷ ಚೇತನ ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಭಾನುವಾರ ಅಧಿಕೃತ ಚಾಲನೆ ದೊರೆಯಿತು.

    ಪ್ರತಿ ವರ್ಷ ಒಂದೊಂದು ವಿನೂತನ, ಸಾಮಾಜಿಕ ಕಾರ್ಯಕ್ಕೆ ಹೆಸರಾದ ಗವಿಮಠ ಈ ಬಾರಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ದಿನದಂದು ಅಂಗವಿಕಲರ ಬಾಳಿಗೆ ಬೆಳಕಾಗುವ ಮೂಲಕ ವಿಶೇಷತೆ ಮೆರೆದಿದೆ. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ, ಎಷ್ಟೋ ವರ್ಷಗಳಿಂದ ವಧು/ವರನಿಗಾಗಿ ಹುಡುಕಾಡಿ ಜೀವನೇ ಮುಗಿಯಿತು ಎಂದುಕೊಂಡಿದ್ದ ಅನೇಕರು ನವ ಜೀವನಕ್ಕೆ ಕಾಲಿಟ್ಟರು. ವಿಶೇಷ ಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಷ್ಟ್ರ ಪ್ರಶಸ್ತಿ ಪುರಸತ ಬಾಗಲಕೋಟೆಯ ನಶ್ಯಾಮ ಬಾಂಡಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವಾಗಿತ್ತು.

    ಗವಿಶ್ರೀಗಳ ಕಾರ್ಯ ಶ್ಲಾಘಿಸಿದ ನಶ್ಯಾಮ್​, ವಿಶೇಷ ಚೇತನ ಬಾಲಕಿಯೊಬ್ಬಳ ಜೀವನ ನೆನೆದು ವೇದಿಕೆ ಮೇಲೆ ಕಣ್ಣೀರಾದರು. ಈ ಸನ್ನಿವೇಶ ಕಂಡು ನವ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ಕೆಲವರು ಭಾವುಕರಾದರು. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಗವಿಶ್ರೀಗಳು ಭಾವುಕರಾಗಿ ಕಣ್ಣು ಒರೆಸಿಕೊಂಡರು. ಮಹಿಳೆಯರು ಸೇರಿ ಸಭಿಕರು ಕೆಲ ಕ್ಷಣ ಮೌನವಾದರು. ವಿವಿಧ ವಿಕಲತೆ ಹೊಂದಿದ ರಾಜ್ಯದ ವಿವಿಧ ಜಿಲ್ಲೆಗಳ ವಧು&ವರರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಿಜಕಲ್​ನ ಶಿವಕುಮಾರ ಮಹಾಸ್ವಾಮಿಗಳು ಗವಿಶ್ರೀಗಳ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ನವ ಜೋಡಿಗಳಿಗೆ ಸೆಲ್ಕೊ ಸಂಸ್ಥೆ ಸಹಭಾಗಿತ್ವದಲ್ಲಿ ಅಂಗಡಿ, ಜೆರಾಕ್ಸ್​ ಮಷೀನ್​, ಹೊಲಿಗೆ ಯಂತ್ರ ಸೌಲಭ್ಯ ಕಲ್ಪಿಸುವ ಮೂಲಕ ಮುಂದಿನ ಜೀವನ ಸ್ವಾವಲಂಬನೆಯಿಂದ ನಡೆಸಲು ಅನುಕೂಲ ಕಲ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts