More

    ಮಾದಿಗರಿಗೆ ಸಿದ್ದರಾಮಯ್ಯ ಗ್ಯಾರಂಟಿ : ಮಾಜಿ ಸಚಿವ ಎಚ್​.ಆಂಜನೇಯ ಹೇಳಿಕೆ

    ಕೊಪ್ಪಳ: ಬಿಜೆಪಿಯವರಿಗೆ ಮೋದಿ ಗ್ಯಾರಂಟಿ ಆದರೆ, ಮಾದಿಗರಿಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಎಂದು ಮಾಜಿ ಸಚಿವ ಎಚ್​.ಆಂಜನೇಯ ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಿಗ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿದರು.

    ಬಡವರು, ಸಂವಿಧಾನ, ರೈತರು, ಮಹಿಳೆಯರ ವಿರೋಧಿ ಬಿಜೆಪಿ ಸೋಲಿಸಿ. ಕಾಂಗ್ರೆಸ್​ ಗೆಲ್ಲಿಸಿ. ಸಂವಿಧಾನ ರಸುವ ಜವಾಬ್ದಾರಿ ಮಾದಿಗರ ಮೇಲಿದೆ. ದೇಶದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಜಾರಿ ತಂದಿದ್ದು ಕಾಂಗ್ರೆಸ್​. ಬಿಜೆಪಿಯವರಿಗೆ ತಾಕತ್ತಿದ್ದರೆ ತಮ್ಮ ಅಧಿಕಾರ ಇರುವೆಡೆ ಕಾಯ್ದೆ ಜಾರಿ ಮಾಡಲಿ. ಗಂಗಾ ಕಲ್ಯಾಣ, ಭೂ ಒಡೆತನ ಸೇರಿ ಅನೇಕ ಯೋಜನೆಗಳಿಗೆ ಬಿಜೆಪಿ ಹಣ ನಿಡಲಿಲ್ಲ. ನಮ್ಮ ಅಭಿವೃದ್ಧಿ ಸಹಿಸದೇ ಅನೇಕ ಯೋಜನೆ ರದ್ದುಗೊಳಿಸಿದರು. ಹೀಗಾಗಿ ನಾವೆಲ್ಲ ಜಾಗೃತರಾಗಬೇಕು. ಕಾಂಗ್ರೆಸ್​ ಎಲ್ಲ ಜಾತಿಗೂ ಟಿಕೆಟ್​ ನೀಡಿದೆ. ಬಿಜೆಪಿ ಈ ಚುನಾವಣೆಯಲ್ಲಿ ಕುರುಬರಿಗೆ ಒಂದು ಟಿಕೆಟ್​ ನೀಡದೇ ಬಲಿಷ್ಠ ಸಮುದಾಯವನ್ನು ತುಳಿವ ಕೆಲಸ ಮಾಡಿದೆ. ಮುಂದೆ ಇತರೆ ಜಾತಿಗೂ ಟಿಕೆಟ್​ ನೀಡದೇ ಅನ್ಯಾಯ ಮಾಡಬಹುದು. ಈ ನಿಟ್ಟಿನಲ್ಲಿ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದರು.

    ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿದರು.

    ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ. ನಾಗರಳ್ಳಿ, ಮುಖಂಡರಾದ ಅಮರೇಶ ಕರಡಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಗಾಳೇಪ್ಪ ಪೂಜಾರ್​, ಈರಪ್ಪ ಕುಡಗುಂಟಿ, ಗ್ರಾಮೀಣ ಬ್ಲಾಕ್​ ಅಧ್ಯಕ್ಷ ಕೃಷ್ಣಾರೆಡ್ಡಿ ಗಲಬಿ, ಬಸವರಾಜ ಭೋವಿ, ಸಿದ್ದೇಶ ಪೂಜಾರ್​, ನಿಂಗಜ್ಜ ಶಹಾಪುರ, ವಿರುಪಣ್ಣ ನವೋದಯ, ಮಲ್ಲಿಕಾರ್ಜುನ ಪೂಜಾರ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts