More

    ಸ್ವಚ್ಛತೆ ಕಾಪಾಡದಿದ್ದರೆ ಶಿಸ್ತು ಕ್ರಮ

    ಬೈಲಕುಪ್ಪೆ: ಆಡು, ಕುರಿ, ಕೋಳಿ ಮಾಂಸದ ಅಂಗಡಿ ಬಿಡ್‌ದಾರರು ಸ್ವಚ್ಛತೆ ಕಾಪಾಡದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಸಾರ್ ಅಹಮದ್ ಬುಧವಾರ ಎಚ್ಚರಿಕೆ ನೀಡಿದರು.
    ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಬಿಡ್ ಪ್ರಕ್ರಿಯೆಯಲ್ಲಿ ಮಾತನಾಡಿದರು.
    ಪಿಡಿಒ ಬೋರೇಗೌಡ ಮಾತನಾಡಿ, ನಾಲ್ಕು ಕೋಳಿ ಮಾಂಸದ ಮಾರಾಟದ ಅಂಗಡಿ, ತಲಾ ಒಂದೊಂದು ಮೇಕೆ ಮಾಂಸದ ಮರಾಠದ ಅಂಗಡಿ, ಮೀನು ಮಾಂಸ, ಹಂದಿ ಮಾಂಸದ ಅಂಗಡಿಗಳಿಗೆ 34.12 ಲಕ್ಷ ರೂ. ಸಂಗ್ರಹಿಸಿದ್ದು, ಗ್ರಾಮ ಪಂಚಾಯಿತಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸದಸ್ಯರಾದ ರಘು, ನವೀನ್ ಕುಮಾರ್, ರಘು, ದಹೋದ್, ಹರೀಶ, ಕಾರ್ಯದರ್ಶಿ ಕುಮಾರ್, ಸಾರ್ವಜನಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts