More

    ಅಂಗವಿಕಲರ ಇಲಾಖೆ ನಿರ್ದೇಶಕಿ ವರ್ಗಾವಣೆ ರದ್ದುಗೊಳಿಸಿ

    ಹೊಸಪೇಟೆ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಲತಾ ಕುಮಾರಿ ವರ್ಗಾವಣೆ ರದ್ದತಿಗೆ ಆಗ್ರಹಿಸಿ ಎಂಆರ್‌ಡಬ್ಲುೃಯು, ಆರ್‌ಡಬ್ಲುೃ ಒಕ್ಕೂಟ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

    ಇಲಾಖೆಯ ಯೋಜನೆಗಳು ಸ್ವಯಂ ಸೇವಾ ಸಂಸ್ಥೆ ಮೂಲಕ ಜಾರಿಯಾಗುತ್ತಿದ್ದವು. ಅದನ್ನ ತಡೆಗಟ್ಟುವುದರ ಜತೆಗೆ ಹಗಲು ದರೋಡೆಗೆ ಲತಾ ಕುಮಾರಿ ಕಡಿವಾಣ ಹಾಕಿದರು. ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತರಲು ಆನ್‌ಲೈನ್ ವ್ಯವಸ್ಥೆ ಆರಂಭಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, ದಕ್ಷ ಆಡಳಿತ ಹಲವರ ಕಣ್ಣು ಕೆಂಪಾಗಿಸಿದೆ.

    ಇದನ್ನೂ ಓದಿ:https://www.vijayavani.net/health-education-importance-give

    ಪಟ್ಟಭದ್ರರು ಲಾಬಿ ನಡೆಸಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ. ಕೂಡಲೇ ವರ್ಗಾವಣೆ ಆದೇಶ ರದ್ದುಗೊಳಿಸಿ, ಅದೇ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts