ಮುಂಬೈ: ಕಂಗನಾ ರಣಾವತ್ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿದ್ದಾರೆ. ಬಾಲಿವುಡ್ನಲ್ಲಿನ ಒಂದೊಂದೆ ವಿಚಾರಗಳನ್ನು ಹೊರಗೆಳೆದು ಅವುಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನೆಪೋಟಿಸಂ ಪೋಷಿಸುವವರ ಚಳಿ ಬಿಡಿಸುತ್ತಿದ್ದಾರೆ. ಇದೀಗ ಮಗದೊಮ್ಮೆ ಬಾಲಿವುಡ್ನಲ್ಲಿನ ಕಾಸ್ಟಿಂಗ್ ಕೌಚ್ ಕರಾಳತೆ ಬಗ್ಗೆ ಕಂಗನಾ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಬೆಲ್ಬಾಟಂ’ ಚಿತ್ರಕ್ಕಾಗಿ 18 ವರ್ಷದ ರೂಲ್ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್!
‘ನಟಿಯಾದವಳು ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು, ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯಬೇಕೆಂದರೆ ಮೊದಲು ಆಕೆ ನಟ, ನಿರ್ದೇಶಕರು ಮತ್ತು ನಿರ್ಮಾಪಕರನ್ನು ಸಂತೋಷ ಪಡಿಸಬೇಕು. ಅದ್ಯಾವ ಮಟ್ಟಿಗೆ ಅಂದರೆ, ಬಾಲಿವುಡ್ನ ಎ ಲಿಸ್ಟ್ ನಟರು, ನಿರ್ದೇಶಕರು ನಟಿಯರನ್ನು ತನ್ನ ಹೆಂಡತಿಯಂತೆ ನೋಡಲು ಬಯಸುತ್ತಾರೆ. ಹಾಗಾಗಿ ನಾವು ಅವರ ಹೆಂಡ್ತಿಯರಂತೆ ಸೆಟ್ನಲ್ಲಿ ವರ್ತಿಸಬೇಕು’ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಗಿರಿಕಥೆಯ ಸುಂದರಿಯರು’
ಈಗಾಗಲೇ ಬಾಲಿವುಡ್ನಲ್ಲಿನ ಒಂದಷ್ಟು ಕರಾಳತೆಯನ್ನು ಬಿಚ್ಚಿಟ್ಟಿರುವ ಕಂಗನಾ, ಡ್ರಗ್ ವಿಚಾರವಾಗಿಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಸುಶಾಂತ್ ಸಾವಿನ ಬಗ್ಗೆಯೂ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧವೂ ಮಾತನಾಡಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್)
FIRST LOOK: ‘ಸತ್ಯಮೇವ ಜಯತೇ 2’ ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ!