ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪುನೀತ್ ಅಭಿನಯದ ‘ಯುವರತ್ನ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿರಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಅದೆಲ್ಲವೂ ಉಲ್ಟಾ ಹೊಡೆಯಿತು. ಹೀಗಿರುವಾಗಲೇ ಇದೀಗ ಇದೇ ಸಿನಿಮಾದಿಂದ ಒಂದಷ್ಟು ಹೊಸ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ. ಅದೇ ಹಾಡುಗಳ ಬಗ್ಗೆ.
ಹೌದು, ಖ್ಯಾತ ಸಂಗೀತ ನಿರ್ದೇಶಕ ತಮನ್ ಬತ್ತಳಿಕೆಯಲ್ಲಿ ಯುವರತ್ನ ಚಿತ್ರಕ್ಕೆ ಐದು ಹಾಡುಗಳು ಸಿದ್ಧಗೊಂಡಿವೆ. ಇನ್ನೇನು ಆ ಹಾಡುಗಳನ್ನು ಅಭಿಮಾನಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ. ಲಾಕ್ಡೌನ್ ತೆರವಾಗುತ್ತಿದ್ದಂತೆ, ಮೊದಲಿಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವದೇಶದಲ್ಲೇ ಯುವರತ್ನ ಗಾನಬಜಾನಾ, ಆಗಸ್ಟ್- ಸೆಪ್ಟೆಂಬರ್ನಲ್ಲಿ ಬಿಡುಗಡೆ ಸಾಧ್ಯತೆ
‘ಯುವರತ್ನ ನಿಮ್ಮೆಲ್ಲರ ನಂಬಿಕೆ, ಪ್ರೀತಿ ಯಾವುದಕ್ಕೂ ಮೋಸ ಆಗದಂತೆ ಸಿನಿಮಾ ಮೂಡಿಬಂದಿದೆ. ನೀವೆಲ್ಲರೂ ಖುಷಿ ಪಡುತ್ತೀರಿ. ಯುವರತ್ನ ಸೆಲೆಬ್ರೆಷನ್ ರೀತಿಯಲ್ಲಿ ಸಿದ್ಧವಾಗಿದೆ. ಆ ಸೆಲೆಬ್ರೆಷನ್ಗೆ ಎಲ್ಲರೂ ಕಾಯಲೇಬೇಕು. ನಿಮ್ಮ ಅಭಿಮಾನ ಹೀಗೆ ಇರಲಿ. ದಯವಿಟ್ಟು ಸಹಕರಿಸಿ. ಸಿಚುವೇಷನ್ ಸಹಜಸ್ಥಿತಿಗೆ ಬರುತ್ತಿದ್ದಂತೆ ಆಡಿಯೋ ಬರಲಿದೆ. ಐದು ಬ್ಲಾಕ್ಬಸ್ಟರ್ ಹಾಡುಗಳನ್ನು ತಮನ್ ಕೊಟ್ಟಿದ್ದಾರೆ’ ಎಂದಿದ್ದಾರೆ ಸಂತೋಷ್ ಆನಂದ್ರಾಮ್.
ಇದನ್ನೂ ಓದಿ: VIDEO| ಜೂ. ಎನ್ಟಿಆರ್ ಬರ್ತ್ಡೇಗೆ ವಾರ್ನರ್ ಕಡೆಯಿಂದ ವಿಶೇಷ ಉಡುಗೊರೆ
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ, ಇಷ್ಟೊತ್ತಿಗಾಗಲೇ ಯೂರೋಪ್ಗೆ ಹಾಡಿನ ಚಿತ್ರೀಕರಣ ಮಾಡುವುದಕ್ಕೆ ಹಾರಬೇಕಿತ್ತು. ಆದರೆ, ಲಾಕ್ಡೌನ್ನಿಂದ ಚಿತ್ರತಂಡದ ಆ ಯೋಚನೆಯನ್ನು ಕೈಬಿಟ್ಟಿದೆ. ಸ್ವದೇಶದಲ್ಲೇ ಹಾಡುಗಳ ಚಿತ್ರೀಕರಣ ಮುಗಿಸಿ, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕರು ಪ್ಲಾನ್ ರೂಪಿಸಿದ್ದಾರೆ. ‘ಯುವರತ್ನ’ ಚಿತ್ರದಲ್ಲಿ ಪುನೀತ್ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್ ನಟಿಸಿದ್ದು, ಮಿಕ್ಕಂತೆ ಧನಂಜಯ್, ದಿಗಂತ್, ಸೋನು ಗೌಡ ಮುಂತಾದವರು ನಟಿಸಿದ್ದಾರೆ.
VIDEO| ಜೂ. ಎನ್ಟಿಆರ್ ಬರ್ತ್ಡೇಗೆ ಪುನೀತ್ ಕಡೆಯಿಂದ ಬಂತು ಶುಭಾಶಯ