More

    ಯುವರತ್ನ ಚಿತ್ರದ ಬಗ್ಗೆ ಸಿಕ್ತು ಹೊಸ ಅಪ್​ಡೇಟ್​; ನಿರ್ದೇಶಕರು ಕೊಟ್ರು ಸಿಹಿ ಸುದ್ದಿ

    ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪುನೀತ್ ಅಭಿನಯದ ‘ಯುವರತ್ನ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿರಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಅದೆಲ್ಲವೂ ಉಲ್ಟಾ ಹೊಡೆಯಿತು. ಹೀಗಿರುವಾಗಲೇ ಇದೀಗ ಇದೇ ಸಿನಿಮಾದಿಂದ ಒಂದಷ್ಟು ಹೊಸ ಅಪ್​ಡೇಟ್​ ಮಾಹಿತಿ ಲಭ್ಯವಾಗಿದೆ. ಅದೇ ಹಾಡುಗಳ ಬಗ್ಗೆ.

    ಹೌದು, ಖ್ಯಾತ ಸಂಗೀತ ನಿರ್ದೇಶಕ ತಮನ್​ ಬತ್ತಳಿಕೆಯಲ್ಲಿ ಯುವರತ್ನ ಚಿತ್ರಕ್ಕೆ ಐದು ಹಾಡುಗಳು ಸಿದ್ಧಗೊಂಡಿವೆ. ಇನ್ನೇನು ಆ ಹಾಡುಗಳನ್ನು ಅಭಿಮಾನಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ. ಲಾಕ್​ಡೌನ್​ ತೆರವಾಗುತ್ತಿದ್ದಂತೆ, ಮೊದಲಿಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವದೇಶದಲ್ಲೇ ಯುವರತ್ನ ಗಾನಬಜಾನಾ, ಆಗಸ್ಟ್- ಸೆಪ್ಟೆಂಬರ್​ನಲ್ಲಿ ಬಿಡುಗಡೆ ಸಾಧ್ಯತೆ

    ‘ಯುವರತ್ನ ನಿಮ್ಮೆಲ್ಲರ ನಂಬಿಕೆ, ಪ್ರೀತಿ ಯಾವುದಕ್ಕೂ ಮೋಸ ಆಗದಂತೆ ಸಿನಿಮಾ ಮೂಡಿಬಂದಿದೆ. ನೀವೆಲ್ಲರೂ ಖುಷಿ ಪಡುತ್ತೀರಿ. ಯುವರತ್ನ ಸೆಲೆಬ್ರೆಷನ್​ ರೀತಿಯಲ್ಲಿ ಸಿದ್ಧವಾಗಿದೆ. ಆ ಸೆಲೆಬ್ರೆಷನ್​ಗೆ ಎಲ್ಲರೂ ಕಾಯಲೇಬೇಕು. ನಿಮ್ಮ ಅಭಿಮಾನ ಹೀಗೆ ಇರಲಿ. ದಯವಿಟ್ಟು ಸಹಕರಿಸಿ. ಸಿಚುವೇಷನ್​ ಸಹಜಸ್ಥಿತಿಗೆ ಬರುತ್ತಿದ್ದಂತೆ ಆಡಿಯೋ ಬರಲಿದೆ. ಐದು ಬ್ಲಾಕ್​ಬಸ್ಟರ್ ಹಾಡುಗಳನ್ನು ತಮನ್​ ಕೊಟ್ಟಿದ್ದಾರೆ’ ಎಂದಿದ್ದಾರೆ ಸಂತೋಷ್ ಆನಂದ್​ರಾಮ್​.

    ಇದನ್ನೂ ಓದಿ: VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ವಾರ್ನರ್​ ಕಡೆಯಿಂದ ವಿಶೇಷ ಉಡುಗೊರೆ

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ, ಇಷ್ಟೊತ್ತಿಗಾಗಲೇ ಯೂರೋಪ್​ಗೆ ಹಾಡಿನ ಚಿತ್ರೀಕರಣ ಮಾಡುವುದಕ್ಕೆ ಹಾರಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರತಂಡದ ಆ ಯೋಚನೆಯನ್ನು ಕೈಬಿಟ್ಟಿದೆ. ಸ್ವದೇಶದಲ್ಲೇ ಹಾಡುಗಳ ಚಿತ್ರೀಕರಣ ಮುಗಿಸಿ, ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕರು ಪ್ಲಾನ್​ ರೂಪಿಸಿದ್ದಾರೆ. ‘ಯುವರತ್ನ’ ಚಿತ್ರದಲ್ಲಿ ಪುನೀತ್​ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್ ನಟಿಸಿದ್ದು, ಮಿಕ್ಕಂತೆ ಧನಂಜಯ್, ದಿಗಂತ್, ಸೋನು ಗೌಡ ಮುಂತಾದವರು ನಟಿಸಿದ್ದಾರೆ.

    VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ಪುನೀತ್​ ಕಡೆಯಿಂದ ಬಂತು ಶುಭಾಶಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts