More

    ಲಾಕ್​ಡೌನ್​ ಕುರಿತ ಸಿನಿಮಾ ಮಾಡಲು ಸಜ್ಜಾದ್ರು ಈ ನಿರ್ದೇಶಕ ; ವಿಚಿತ್ರ ಏನಂದ್ರೆ, ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲ್ವಂತೆ..!!

    ಬೆಂಗಳೂರು: ಕರೊನಾ ಬಂದಿದ್ದೇ ಬಂದಿದ್ದು, ಆ ಕುರಿತು ಹಲವು ಸಿನಿಮಾಗಳನ್ನು ಮಾಡಲು ಸಾಕಷ್ಟು ನಿರ್ದೇಶಕರು ಸಜ್ಜಾಗಿದ್ದಾರೆ. ಕಥೆ ಬರೆದು, ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ಇನ್ನು ಕೆಲವರು ಹಲವು ಶೀರ್ಷಿಕೆಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಇದೀಗ ಮಠ, ಎದ್ದೇಳು ಮಂಜುನಾಥ್ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕರೊನಾ ಲಾಕ್​ಡೌನ್​ ಕುರಿತು ಸಿನಿಮಾ ಮಾಡಲು ಪ್ಲ್ಯಾನ್​ ರೂಪಿಸಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ ಎಲ್ಲವನ್ನೂ ಬರೆದು ಮುಗಿಸಿದ್ದಾರಂತೆ. ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆಯಂತೆ.
    ಹೌದು, ಇನ್ನೇನಿದ್ದರೂ ತಾರಾಗಣ ಪಕ್ಕಾ ಮಾಡಿಕೊಂಡು, ಕರೊನಾ ಹಾವಳಿ ಶಾಂತವಾದ ಬಳಿಕ ಶೂಟಿಂಗ್​ ಶುರುಮಾಡಲಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾವನ್ನು ಆ್ಯಪ್​ ಮೂಲಕ ತೋರಿಸುವ ಲೆಕ್ಕಾಚಾರ ನಿರ್ದೇಶಕರದ್ದು. ಈಗಾಗಲೇ ಆ್ಯಪ್ ಅಭಿವೃದ್ಧಿಪಡಿಸುವಿಕೆಯ ಕೆಲಸ ಶುರುವಾಗಿದ್ದು, 100 ರೂ. ಕೊಟ್ಟು ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಅದರಲ್ಲಿ ಸಿನಿಮಾ ನೋಡಬಹುದಂತೆ. ಇನ್ನು ಈ ಸಿನಿಮಾ ಒಂದೆಡೆಯಾದರೆ, ನವರಸನಾಯಕ ಜಗ್ಗೇಶ್​ ಜತೆ ರಂಗನಾಯಕ ಸಿನಿಮಾ ಸ್ಕ್ರಿಪ್ಟ್​ ಕೆಲಸಗಳಲ್ಲೂ ಗುರುಪ್ರಸಾದ್​ ಬಿಜಿಯಾಗಿದ್ದಾರೆ. ಆ ಚಿತ್ರದ ಕೆಲಸಗಳೂ ಸಹ ಲಾಕ್​ಡೌನ್​ ಮುಗಿದ ಬಳಿಕ ಶುರುವಾಗುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts