ಬೆಂಗಳೂರು: ಕರೊನಾ ಎರಡನೇ ಅಲೆಗೆ ಬಲಿಯಾದ ಚಿತ್ರರಂಗಕ್ಕೆ ಸಂಬಂಧಿಸಿದ ಮೊದಲ ವ್ಯಕ್ತಿ ಎಂದರೆ ಅದು ನಟ-ನಿರ್ಮಾಪಕ ಮಂಜುನಾಥ್. ಈಗ ‘೦% ಲವ್’ ಚಿತ್ರದ ನಿರ್ದೇಶಕ ಅಭಿರಾಮ್ ಸಹ ಕರೊನಾದಿಂದ ಇನ್ನಿಲ್ಲವಾಗಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮಾನನಷ್ಟ ಕೇಸ್ ಹೂಡಿದ್ದು ಯಾಕೆ? ಇಲ್ಲಿದೆ ಉತ್ತರ …
ಮಂಜುನಾಥ್ ಮತ್ತು ಅಭಿರಾಮ್ ಇಬ್ಬರೂ ಜತೆಯಾಗಿ ಚಿತ್ರರಂಗಕ್ಕೆ ಬಂದವರು. ‘ಸಂಯುಕ್ತಾ 2’ ಚಿತ್ರವನ್ನು ಮಂಜುನಾಥ್ ನಿರ್ಮಿಸುವುದರ ಜತೆಗೆ ಒಂದು ಪ್ರಮುಖ ಪಾತ್ರ ವಹಿಸಿದರೆ, ಅಭಿರಾಮ್ ಆ ಚಿತ್ರವನ್ನು ನಿರ್ದೇಶಿಸಿದ್ದರು. ಆ ನಂತರ ಮಂಜುನಾಥ್ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ಇನ್ನೊಬ್ಬರ ನಿರ್ದೇಶನದಲ್ಲಿ ತೆರೆಗೆ ತಂದರು.
ಇದಾದ ಮೇಲೆ, ‘೦% ಲವ್’ ಚಿತ್ರದಲ್ಲಿ ಮಂಜುನಾಥ್ ಮತ್ತು ಅಭಿರಾಮ್ ಮತ್ತೆ ಜತೆಯಾದರು. ಅಭಿರಾಮ್ ಈ ಚಿತ್ರವನ್ನು ನಿರ್ದೇಶಿಸಿದರೆ, ಮಂಜುನಾಥ್ ನಿರ್ಮಾಣದ ಜತೆಗೆ ನಾಯಕರಾಗಿಯೂ ಅಭಿನಯಿಸಿದರು. ಈಗ ಆ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಅವರಿಬ್ಬರೂ ಕರೊನಾದಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ: ಓಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ ‘ಪಲ್ಲವಿ ಟಾಕೀಸ್’ …
ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶುಕ್ರವಾರ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಕನಸಿಟ್ಟು ರೂಪಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಇಬ್ಬರನ್ನೂ ಕೊರೋನಾ ನುಂಗಿಕೊಂಡಿದೆ.
‘ಬಿಗ್ ಬಾಸ್’ ನಡೆಸಿಕೊಡಲು ಕಮಲ್ ಹಾಸನ್ ಪಡೆಯಲಿರುವ ಸಂಭಾವನೆ ಎಷ್ಟು?