2017ರಲ್ಲಿ ಟಾಲಿವುಡ್ನಲ್ಲಿ ಬಿಡುಗಡೆ ಆಗಿದ್ದ ಅರ್ಜುನ್ ರೆಡ್ಡಿ ಸೂಪರ್ ಹಿಟ್ ಸಿನಿಮಾ. ನಟ ವಿಜಯ್ ದೇವರಕೊಂಡ ಕರಿಯರ್ಗೆ ದೊಡ್ಡ ಸಕ್ಸಸ್ ಕೊಟ್ಟ ಚಿತ್ರ. ಇದೀಗ ಈ ಚಿತ್ರದ ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ ನಿರ್ದೇಶಕ ಸಂದೀಪ್ ವಂಗ.
ಹೌದು, ನಿರ್ದೇಶಕ ಸಂದೀಪ್ ಅಂದುಕೊಂಡಂತೆ ಆಗಿದ್ದರೆ, ಟಾಲಿವುಡ್ನ ಮತ್ತೋರ್ವ ನಟ ಶರ್ವಾನಂದ್ ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕಿತ್ತು. ಕಥೆ ಕೇಳಿ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದ ಶರ್ವಾನಂದ್, ಕೊನೇ ಕ್ಷಣದಲ್ಲಿ ಸಿನಿಮಾದಲ್ಲಿ ನಟಿಸಲಿಲ್ಲ. ಕೊನೆಗೆ ಅದು ವಿಜಯ್ ದೇವರಕೊಂಡ ಪಾಲಿಗೆ ಒಲಿಯಿತು. ಕಥೆ ಕೇಳುತ್ತಿದ್ದಂತೆಯೇ ನಟಿಸಲು ಒಪ್ಪಿಕೊಂಡರು ವಿಜಯ್. ನಿರೀಕ್ಷೆಗೂ ಮೀರಿ ಸಿನಿಮಾ ಹಿಟ್ ಆಯಿತು. ಟಾಲಿವುಡ್ನಲ್ಲಿ ದೊಡ್ಡ ಕ್ರೇಜ್ಗೆ ಕಾರಣವಾಯಿತು.
ಇದನ್ನೂ ಓದಿ: ಕೊನೆಗೂ ಅಂತ್ಯವಾಯಿತಾ ಸನ್ನಿ-ಶಾರೂಖ್ ನಡುವಿನ ಕೋಲ್ಡ್ ವಾರ್?
ಹಾಗಾದರೆ, ಶರ್ವಾನಂದ್ ಹಿಂದೆ ಸರಿದಿದ್ದಕ್ಕೆ ಕಾರಣವೇನು? ನಿರ್ದೇಶಕರ ಪ್ರಕಾರ ಚಿತ್ರದ ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವಂತೆ ಶರ್ವಾನಂದ್ ಸಲಹೆ ನೀಡಿದ್ದರು. ಜತೆಗೆ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿಯೂ ಅವರು ಬಿಜಿಯಾಗಿದ್ದರು. ನಿರ್ದೇಶಕರು ಒಂದಷ್ಟು ಬದಲಾವಣೆಗೆ ಒಪ್ಪಿಕೊಂಡರಾದರೂ, ಕಾಲ್ಶೀಟ್ ಸಮಸ್ಯೆಯಿಂದ ಸಿನಿಮಾದಿಂದ ಶರ್ವಾನಂದ್ ಹಿಂದೆ ಸರಿಯಬೇಕಾಯಿತು. (ಏಜೆನ್ಸೀಸ್)