ಮುಂಬೈ: ಬಹುಭಾಷಾ ತಾರೆ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಕುರಿತಂತೆ ಡೇಟಿಂಗ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಲೇ ಇರುತ್ತದೆ. ರಶ್ಮಿಕಾ ಯಾವುದೇ ವೇದಿಕೆಗೆ ಹೋದರೂ ಅಲ್ಲಿ ವಿಜಯ್ ಹೆಸರು ಮೊದಲಿಗೆ ಕೇಳಿಬರುತ್ತದೆ. ಈ ಬೆಳವಣಿಗೆಗಳು ನಟಿಗೆ ತೀರ ಸಾಮಾನ್ಯವಾಗಿ ಹೋಗಿದೆ. ಇದೀಗ ತಾವು ನಟಿಸಿದ ‘ಅನಿಮಲ್’ ಚಿತ್ರವು ರಿಲೀಸ್ಗೆ ಸಜ್ಜಾಗಿದ್ದು, ಸಂದರ್ಶನದ ವೇಳೆ ಮತ್ತೊಮ್ಮೆ ತಮ್ಮಿಬ್ಬರ ವದಂತಿಗಳು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ನಿಮ್ಮಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ -ಬಿಎಸ್ ವೈ ತೇಜೋವಧೆ ಸಹಿಸಲ್ಲ – ಸೋಮಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಅನಿಮಲ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತು. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿರುವ ಇಬ್ಬರು, ನಟ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋನಲ್ಲಿ ಹಾಜರಾಗಿ, ಕೆಲುವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ರಣಬೀರ್ ಮತ್ತು ರಶ್ಮಿಕಾ ಪಾಲ್ಗೊಂಡು ಸಿನಿಮಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಸಂದೀಪ್ ರೆಡ್ಡಿ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ಚಿತ್ರದ ಪೋಸ್ಟರ್ಗಳನ್ನು ತೋರಿಸಿದರು. ಇದು ವಿಜಯ್ ದೇವರಕೊಂಡ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿತು.
ಇದನ್ನೂ ಓದಿ: ಮನ್ಸೂರ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ತ್ರಿಷಾ; ಅಷ್ಟಕ್ಕೂ ಹೇಳಿದ್ದೇನು?
ಸಂದೀಪ್ ಹಾಗೂ ರಶ್ಮಿಕಾಗೆ ಪ್ರಶ್ನಿಸಿದ ಬಾಲಕೃಷ್ಣ, ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಹೇಳಿ ಎಂದು ಕೇಳಿದರು. ರಶ್ಮಿಕಾ ಮುಖ ನೋಡಿದ ರಣಬೀರ್, ತಮಾಷೆಯಾಗಿ ಗೇಲಿ ಮಾಡುತ್ತಾ, “ಯಾರು ಉತ್ತಮ ನಟ ಎಂದು ಭಾವಿಸುತ್ತೀರಿ? ರೀಲ್ ಹೀರೋ ಅಥವಾ ರಿಯಲ್ ಹೀರೋ” ಎಂದು ಹೇಳಿದರು. ಈ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ನಿರಾಕರಿಸಿದರು.
ಕೂಡಲೇ ವಿಜಯ್ಗೆ ಕರೆ ಮಾಡಿ ಸಂದೀಪ್ ಎಂದ ಬಾಲಕೃಷ್ಣ, ವಿಜಯ್ ದೇವರಕೊಂಡಗೆ ಕಾಲ್ ಮಾಡಿಸಿದರು. ಆದ್ರೆ, ಆ ಸಮಯಕ್ಕೆ ಅವರು ಕರೆ ಸ್ವೀಕರಿಸಿಲ್ಲ. ಆಗ ರಣಬೀರ್ ತಮಾಷೆಯಾಗಿ, “ಸರ್, ರಶ್ಮಿಕಾ ಕರೆ ಮಾಡಲಿ, ಸಂದೀಪ್ ಕರೆಯನ್ನು ಅವರು ಎತ್ತುವುದಿಲ್ಲ” ಎಂದು ಹೇಳಿದರು. ತಕ್ಷಣ ಮುಗುಳುನಗೆ ಚೆಲ್ಲಿದ ರಶ್ಮಿಕಾಗೆ ರಣಬೀರ್ ಫೋನ್ ಮಾಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಎಲ್ಲೆಲ್ಲೂ ಮಲಯಾಳಿಗಳು…182 ದೇಶಗಳಲ್ಲಿ ಇವರದ್ದೇ ಹವಾ: ಯುಎಇಯಲ್ಲಿದೆ ಹೆಚ್ಚಿನ ಸಂಖ್ಯೆ
ತದನಂತರ ವಿಜಯ್ಗೆ ಕರೆ ಮಾಡಿದ್ದಾರೆ. ಆದ್ರೆ, ಅವರು ಕರೆ ಸ್ವೀಕರಿಸಲಿಲ್ಲ. ಬಳಿಕ ಫೋನ್ ಮಾಡಿದ ದೇವರಕೊಂಡ ಅವರನ್ನು ಮಾತನಾಡಿಸಿದ ರಶ್ಮಿಕಾ, ಕೆಲ ಸಮಯ ಸಂಭಾಷಣೆ ನಡೆಸಿದರು. ಇದೇ ವಿಷಯವನ್ನು ಮುಂದಿಟ್ಟು ಕಾರ್ಯಕ್ರಮದಲ್ಲಿ ರಣಬೀರ್-ಸಂದೀಪ್ ಮತ್ತು ಬಾಲಕೃಷ್ಣ ಅವರು ರಶ್ಮಿಕಾ ಕಾಲೆಳೆದಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ,(ಏಜೆನ್ಸೀಸ್).
ಬೆಂಗಳೂರು “ರಾಜ-ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪಟ್ಟಿ ಇಲ್ಲಿದೆ ನೋಡಿ