ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೇನಾ ರಾಜ್ ಸರ್ಜಾ ಕಮ್ಬ್ಯಾಕ್ ಮಾಡಿರುವ ಚಿತ್ರ “ತತ್ಸಮ ತದ್ಭವ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಡಾಲಿ ಧನಂಜಯ ಮತ್ತು ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಾಯಕಿ ಮೇನಾ ರಾಜ್ ಸರ್ಜಾ, “ನಾನು ಸಿನಿಮಾಗಳಲ್ಲಿ ನಟಿಸಬಾರದು ಅಂತ ನಿರ್ಧರಿಸಿದಾಗ ಬಂದ ಅವಕಾಶವಿದು. ಈ ಸಿನಿಮಾ ಆರಂಭವಾಗಲು ನನ್ನ ಪತಿ ಚಿರು ಕಾರಣ. ಅವರಿಗೆ, ಪ್ರಜ್ವಲ್ ಮತ್ತು ಪನ್ನಗಾಭರಣ ಜತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಆಸೆಯಿತ್ತು. ನಂತರ ಪನ್ನಗಾಭರಣ ಈ ಚಿತ್ರದ ಕಥೆಯನ್ನು ಹೇಳಳು ನಿರ್ದೇಶಕರನ್ನು ಮನೆಗೆ ಕಳುಹಿಸಿದರು. ಕಥೆ ಇಷ್ಟವಾದ ಕಾರಣ ನಟಿಸಲು ಒಪ್ಪಿಕೊಂಡೆ. ನಾನಿಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಹೇಳಿಕೊಂಡರು.
ಇದನ್ನೂ ಓದಿ : ಸೆ. 15ಕ್ಕೆ ಹೊಸಬರ ಲವ್ ; ಧರ್ಮಗಳನ್ನು ಮೀರಿದ ಪ್ರೇಮಕಥೆ
ಪ್ರಜ್ವಲ್ ದೇವರಾಜ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ತಂದೆ ದೇವರಾಜ್ ಚಿತ್ರಕ್ಕೆ ಧ್ವನಿ ನೀಡಿರುವ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕ ವಿಶಾಲ್ ಆತ್ರೇಯಗೆ ಇದು ಚೊಚ್ಚಲ ಸಿನಿಮಾ. “ಇದೊಂದು ಕೆಮ್ ಥ್ರಿಲ್ಲರ್ ಚಿತ್ರ. ಆದರೆ, ಮಾಮೂಲಿ ಕೆಮ್ ಥ್ರಿಲ್ಲರ್ಗಳಿಗಿಂತ ವಿಭಿನ್ನ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ’ ಎಂದು ಹೇಳಿಕೊಂಡರು.
ಇದನ್ನೂ ಓದಿ : ಜಡ್ಜ್ ಪಾತ್ರದಲ್ಲಿ ದತ್ತಣ್ಣ ; ಕೋರ್ಟ್ರೂಮ್ ಡ್ರಾಮ “ಯಥಾಭವ’ ಟೀಸರ್ ಬಿಡುಗಡೆ
ಈ ಚಿತ್ರವನ್ನು ನಿರ್ಮಿಸಿರುವ ಪನ್ನಗಾಭರಣ, “ಸೆ. 15ರಂದು ಸಿನಿಮಾ ರಿಲೀಸ್ ಆಗಲಿದೆ. ನಮ್ಮ ಚಿತ್ರದ ಟಿಕೆಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೆಟ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಗ ಹಲವರಿಗೆ ಗಿಫ್ಟ್ ಕೂಪನ್ಗಳು ದೊರೆಯಲಿವೆ’ ಎಂದು ಮಾಹಿತಿ ನೀಡಿದರು. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣವಿರಲಿದೆ.