ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗೌತಮ್ ಬಸವರಾಜು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ “ಯಥಾಭವ’. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಟೀಸರ್ ಬಿಡುಗಡೆ ಮಾಡಿದೆ. ನಿರ್ದೇಶಕ ಗೌತಮ್ ಬಸವರಾಜು, “ಇದೊಂದು ಕೋರ್ಟ್ರೂಮ್ ಡ್ರಾಮ ಜಾನರ್ ಚಿತ್ರ. ಕಳೆದ ವರ್ಷ ಹೈದರಾಬಾದ್ನಲ್ಲಿ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡೆ. ನಂತರ 21 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದೆವು. ಚಿತ್ರದ ಶೇಕಡಾ 70ರಷ್ಟು ಭಾಗ ಕೋರ್ಟ್ನಲ್ಲಿ ನಡೆಯುತ್ತದೆ. ಸದ್ಯ ಹೈದರಾಬಾದ್ ಮತ್ತು ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಪೌಡರ್ನಲ್ಲಿ ಪೇಡಾ! ಸೆಟ್ಟೇರಿತು ನಟ ದಿಗಂತ್ ಹೊಸ ಚಿತ್ರ ‘ಪೌಡರ್’
ನಂತರ ಹಿರಿಯ ನಟ ದತ್ತಣ್ಣ, “ಕನ್ನಡದಲ್ಲಿ ಈಗ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಹೊಸ ಚಿತ್ರಗಳು ಗೆಲ್ಲುತ್ತಿವೆ. ನಾನು ಈ ಚಿತ್ರದಲ್ಲಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಕುರಿತು ಓದಿಕೊಂಡಿರುವ ಈ ಚಿತ್ರತಂಡದ ಜತೆ ಕೆಲಸ ಮಾಡಿದ್ದು ಸಂತೋಷವಾಗಿದೆ’ ಎಂದು ಖುಷಿ ಹಂಚಿಕೊಂಡರು. ಬಾಲ ರಾಜವಾಡಿ, “ಈ ಚಿತ್ರದಲ್ಲಿ ಗೃಹ ಸಚಿವನ ಪಾತ್ರ ನನ್ನದು. ನಾಯಕಿಯ ತಂದೆಯೂ ಹೌದು’ ಎಂದರು.
ಇದನ್ನೂ ಓದಿ : ಸಿಕ್ಸ್ ಪ್ಯಾಕ್ ಸುದೀಪ್ ; 46ನೇ ಸಿನಿಮಾಗಾಗಿ ಕಿಚ್ಚನ ತಯಾರಿ
ನಾಯಕ ಪವನ್ ಶಂಕರ್ಗೆ ಇದು ಮೊದಲ ಚಿತ್ರ. ನಾಯಕಿ ಸಹನಾ ಸುಧಾಕರ್ ಇಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ಲೈನ್ ಸುಧಾಕರ್ ಪುತ್ರ ಗೌತಮ್ ಸುಧಾಕರ್ ಮುಖ್ಯ ಭೂಮಿಕೆಯಲ್ಲಿದ್ದು ಜತೆಗೆ ನೀನಾಸಂ ಆನಂದ್, ಮಹೇಶ್ ಕಲಿ, ಯಶಸ್ವಿನಿ ರವೀಂದ್ರ, ಮಾಸ್ಟರ್ ಶಮಂತ್ ತಾರಾಗಣದಲ್ಲಿದ್ದಾರೆ.