ಮುಂಬೈ: ಹಿಂದೆ ಮಿತ್ರಪಕ್ಷಗಳಾಗಿದ್ದ ಬಿಜೆಪಿ-ಶಿವಸೇನೆ ಇದೀಗ ಬದ್ಧ ವೈರಿಗಳಾದಂತಾಗಿವೆ. ಶಿವಸೇನೆಯಂತೂ ಬಿಜೆಪಿ ಮೈತ್ರಿಯನ್ನು ತ್ಯಜಿಸಿದ ನಂತರ ಸತತ ವಾಗ್ದಾಳಿ ನಡೆಸುತ್ತಲೇ ಇದೆ.
ಆದರೆ ಈಗ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಸೇನೆ ನಾಯಕ ಸಂಜಯ್ ರಾವತ್ ಅವರನ್ನು ಭೇಟಿಯಾಗಿ, ಗುಟ್ಟಾಗಿ ಮೀಟಿಂಗ್ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.
ಫಡ್ನವೀಸ್ ಮತ್ತು ರಾವತ್ ಮುಂಬೈನ ಹೊರವಲಯದಲ್ಲಿರುವ ಹೋಟೆಲ್ನಲ್ಲಿ ಭೇಟಿಯಾದ ವಿಚಾರ ಹೊರಬೀಳುತ್ತಿದ್ದಂತೆ ಅನೇಕ ಊಹಾಪೋಹಗಳು ಎದ್ದಿವೆ. ಇವರಿಬ್ಬರ ಭೇಟಿ ಬಗ್ಗೆ ಮಾತುಕತೆಗಳು ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರದ ಬಿಜೆಪಿಯ ಮುಖ್ಯ ವಕ್ತಾರ ಕೇಶವ್ ಉಪಾಧ್ಯೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗಂಧರ್ವರಿಗೆ ಹಾಡುವುದಕ್ಕೆ ಹೋದೆಯಾ? ಎಸ್ಪಿಬಿಗೆ ಇಳಯರಾಜ ಪ್ರಶ್ನೆ
ದೇವೇಂದ್ರ ಫಡ್ನವೀಸ್ ಹಾಗೂ ಸಂಜಯ್ ರಾವತ್ ಅವರ ಭೇಟಿ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಶಿವಸೇನೆ ಮುಖವಾಣಿ ಸಾಮ್ನಾಕ್ಕಾಗಿ ಫಡ್ನವೀಸ್ ಅವರನ್ನು ಸಂದರ್ಶನ ಮಾಡಲು ಸಂಜಯ್ ರಾವತ್ ಇಚ್ಛಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡುವುದಕ್ಕೋಸ್ಕರವಷ್ಟೇ ಪೂರ್ವಭಾವಿಯಾಗಿ ಇವರಿಬ್ಬರೂ ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆ ಮುಗಿದ ಬಳಿಕ ಸಂದರ್ಶನ ಕೊಡುವುದಾಗಿ ಫಡ್ನವೀಸ್ ಹೇಳಿದ್ದಾಗಿ ಉಪಾಧ್ಯೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
‘ಮನುಕುಲದ ಹಿತಾಸಕ್ತಿಯೇ ಭಾರತದ ಆದ್ಯತೆ..ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಸಹಾಯ ಮಾಡುತ್ತೇವೆ’