ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆ ಕುರಿತು ದೇಶಾದ್ಯಂತ ಭಾರೀ ಸಂಚಲನವೇ ಉಂಟುಮಾಡಿತ್ತು.
ಇನ್ನೇನು ದೇವೇಂದ್ರ ಫಡ್ನವಿಸ್ ಅವರು ಎರಡನೇ ಬಾರಿಗೆ ಮುಖಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಕೊನೇ ಘಳಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದ ರಾಜಕೀಯ ಚತುರ ಏಕನಾಥ್ ಶಿಂಧೆ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಇದು ಸ್ವತಃ ಫಡ್ನವಿಸ್ ಅವರಿಗೂ ಶಾಕ್ ಆಗಿತ್ತು.
ಆದರೆ ಡಿಸಿಎಂ ಸ್ಥಾನಕ್ಕೆ ಫಡ್ನವಿಸ್ ಅವರ ಹೆಸರನ್ನು ಪ್ರಕಟಿಸಲಾಯಿತು. ಈ ಎಲ್ಲಾ ಬೆಳವಣಿಗಗಳ ಬೆನ್ನಲ್ಲೇ ಫಡ್ನವಿಸ್ ನಿಜಕ್ಕೂ ಡಿಸಿಎಂ ಹುದ್ದೆಗೆ ಸ್ವತಃ ಒಪ್ಪಿಕೊಂಡಿರಬಹುದು ಎಂದೇ ಭಾವಿಸಲಾಗಿತ್ತು.
ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಫಡ್ನವಿಸ್, ಮೊದಲು ನಾನು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ, ನನ್ನ ಒಪ್ಪಿಗೆ ಬಗ್ಗೆ ಹೇಳಿರಲಿಲ್ಲ, ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಬಂದಿತ್ತು. ಆ ಬಳಿಕವೇ ಡಿಸಿಎಂ ಹುದ್ದೆಗೆ ಒಪ್ಪಿಕೊಂಡೆ ಎಂದು ಬಹಿರಂಗಪಡಿಸಿದ್ದಾರೆ. ಪ್ರಧಾನಿ ಅವರ ಬಳಿಕ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಂದಲೂ ಕರೆ ಬಂದಿತ್ತು, ಈ ಬಳಿಕ ನಾನು ಈ ಹುದ್ದೆಗೆ ಒಪ್ಪಿಕೊಂಡಿದ್ದು ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಶಿವಸೇನೆಯಿಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ವಜಾಗೊಳಿಸಿದ ಉದ್ಧವ್ ಠಾಕ್ರೆ
ವಿವಾಹಪೂರ್ವ ಲೈಂಗಿಕತೆ ಹಾಗೂ ಗರ್ಭಾವಸ್ಥೆಗೆ ನನ್ನ ಬೆಂಬಲವಿದೆ: ಮತ್ತೆ ಟ್ರೋಲ್ ಆದ ದಿಯಾ ಮಿರ್ಜಾ