More

    ಗಣ ರಾಜ್ಯೋತ್ಸವ ಪರೇಡ್​ಗೆ ಮುಖ್ಯ ಅತಿಥಿಯಾಗಲಿರುವ ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ನವದೆಹಲಿಗೆ ಆಗಮನ

    ನವದೆಹಲಿ: ಭಾರತಕ್ಕೆ ಇಂದು ಬೆಳಗ್ಗೆ ಆಗಮಿಸಿದ ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು.

    ನಾಳೆ ನಡೆಯಲಿರುವ ಗಣ ರಾಜ್ಯೋತ್ಸವ ಪರೇಡ್​ನಲ್ಲಿ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಬ್ರೆಜಿಲ್​ ಅಧ್ಯಕ್ಷರ ಈ ಭೇಟಿಯಿಂದ ದ್ವಿಪಕ್ಷೀಯ ಸಂಬಂಧಗಳಿಗೆ ಬಲ ಬರಲಿದೆ. ಮುಖ್ಯವಾಗಿ ಕೃಷಿ ಕ್ಷೇತ್ರ, ಇಂಧನ ಮತ್ತು ರಕ್ಷಣಾ ಕೇತ್ರಗಳಲ್ಲಿ ಮಹತ್ವದ ತೀರ್ಮಾನಗಳು ಹೊರ ಬೀಳಲಿವೆ.

    ಬೋಲ್ಸನಾರೊ ಅವರೊಂದಿಗೆ ಸಹೋದ್ಯೋಗಿ ಸಚಿವರು, ಉನ್ನತ ಅಧಿಕಾರಿಗಳು, ಅಲ್ಲಿನ ಪಾರ್ಲಿಮೆಂಟ್​ನ ಭಾರತ ಮತ್ತು ಬ್ರೆಜಿಲ್ ದೇಶದ ಸ್ನೇಹ ಗುಂಪಿನ ಅಧ್ಯಕ್ಷ ಮತ್ತು ಇತರ ಉದ್ಯಮಿಗಳು ಆಗಮಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts