ನವದೆಹಲಿ: ಭಾರತಕ್ಕೆ ಇಂದು ಬೆಳಗ್ಗೆ ಆಗಮಿಸಿದ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು.
ನಾಳೆ ನಡೆಯಲಿರುವ ಗಣ ರಾಜ್ಯೋತ್ಸವ ಪರೇಡ್ನಲ್ಲಿ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬ್ರೆಜಿಲ್ ಅಧ್ಯಕ್ಷರ ಈ ಭೇಟಿಯಿಂದ ದ್ವಿಪಕ್ಷೀಯ ಸಂಬಂಧಗಳಿಗೆ ಬಲ ಬರಲಿದೆ. ಮುಖ್ಯವಾಗಿ ಕೃಷಿ ಕ್ಷೇತ್ರ, ಇಂಧನ ಮತ್ತು ರಕ್ಷಣಾ ಕೇತ್ರಗಳಲ್ಲಿ ಮಹತ್ವದ ತೀರ್ಮಾನಗಳು ಹೊರ ಬೀಳಲಿವೆ.
ಬೋಲ್ಸನಾರೊ ಅವರೊಂದಿಗೆ ಸಹೋದ್ಯೋಗಿ ಸಚಿವರು, ಉನ್ನತ ಅಧಿಕಾರಿಗಳು, ಅಲ್ಲಿನ ಪಾರ್ಲಿಮೆಂಟ್ನ ಭಾರತ ಮತ್ತು ಬ್ರೆಜಿಲ್ ದೇಶದ ಸ್ನೇಹ ಗುಂಪಿನ ಅಧ್ಯಕ್ಷ ಮತ್ತು ಇತರ ಉದ್ಯಮಿಗಳು ಆಗಮಿಸಿದ್ದಾರೆ. (ಏಜೆನ್ಸೀಸ್)