ಬಾಳೆಹೊನ್ನೂರು: ಹಳೇ ಕಡಬಗೆರೆಯಲ್ಲಿ ಜಿಂಕೆ ಮತ್ತು ಕಾಡು ಕೋಣಗಳ ಕೊಂಬುಗಳನ್ನು ಸಂಗ್ರಹಿಸಿದ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಜಿಂಕೆ 19 ಕೊಂಬುಗಳು, ಕಾಡುಕೋಣದ 4 ಕೊಂಬುಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಹಳೇ ಕಡಬಗೆರೆಯ ಅನಿಲ್ ಥಾಮಸ್ ಅಂತೋಣಿ ಬಂಧಿತ ಆರೋಪಿ. ಮತ್ತೋರ್ವ ಬಾಳೆಗದ್ದೆಯ ಸಂದೇಶ್ ಪರಾರಿಯಾಗಿದ್ದಾನೆ. ಡಿಎಫ್ಒ ತಾಕತ್ ಸಿಂಗ್ ಹಾಗೂ ಎಸಿಎಫ್ ಸತೀಶ್ ಮಾರ್ಗದರ್ಶನದಲ್ಲಿ ಆರ್ಎಫ್ಒ ನಿರಂಜನ್, ಹೆಬ್ಬೆ ವಲಯದ ಆರ್ಎಫ್ಒ ಕಿರಣ್, ಐಎಫ್ಎಸ್ ಪ್ರೊಬೇಷನರಿ ಅಧಿಕಾರಿ ಸಂದೀಪ್ ಸೂರ್ಯವಂಶಿ, ವಿಶೇಷ ಸಂಚಾರಿದಳದ ಸೌಮ್ಯಾ ಮಂಜುನಾಥ್, ತ್ಯಾವರೆ ನಾಯ್್ಕ ಸಂಪ್ರೀತ್, ಸಂತೋಷ್ ಜೋಗಿ, ಎನ್.ಎಸ್.ಸಂಜಯ್, ವಾಹನ ಚಾಲಕ ಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.