ಶ್ರೀನಗರ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನಿಯಂತ್ರಣ ರೇಖೆಯ ಸಮೀಪ ಹಿಮಪಾತವಾದ ಎಂಟು ತಿಂಗಳ ನಂತರ ಗುಲ್ಮಾರ್ಗ್ನಲ್ಲಿ ಯೋಧನೊಬ್ಬನ ಶವ ಶನಿವಾರ ದೊರೆತಿದೆ.
ಆರ್ಮಿ 11 ಗಡ್ವಾಲ್ನ ಸೈನಿಕ ರಾಜಿಂದರ್ ಸಿಂಗ್ ನ ಶವವನ್ನು ಇಂದು ನಿಯಂತ್ರಣ ರೇಖೆಯ ಸಮೀಪ ರೋಶ್ನಿ 1 ನೇ ಪೋಸ್ಟ್ ಗುಲ್ಮಾರ್ಗ್ನಲ್ಲಿ ಪತ್ತೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಮಪಾತದಿಂದಾಗಿ ಕಳೆದ ಜನವರಿ 8 ರಿಂದ ಈ ಯೋಧ ಕಾಣೆಯಾಗಿದ್ದ.
“ಮುಂದಿನ ಅಗತ್ಯ ಕ್ರಮಕ್ಕಾಗಿ ಶವವನ್ನು ಗುಲ್ಮಾರ್ಗ್ ಪೊಲೀಸ್ ಠಾಣೆಗೆ ತರಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.